Monday, December 27, 2010

ಅಂದೊಂದಿತ್ತು "ಅಮ್ಮನ ಸೀರೆ "


ಅಂದೊಂದಿತ್ತು "ಅಮ್ಮನ ಸೀರೆ "
ಹೊಡೆದ  ಹಣೆ   ರಕ್ತವನ್ನ 
ಓರೆಸುವ ಕರವಸ್ತ್ರವಾಗಿತ್ತು,
ಮುರಿದ ಕಾಲ ಕಟ್ಟುವ 
ಮೊದಲ ಬಟ್ಟೆಯೂ ಅದಾಗಿತ್ತು . 

ಧಣಿದು ಬಂದ ಬೆವರಿಗೆ 
ಆಸರೆಯಾಗಿತ್ತು   "ಅಮ್ಮನ ಸೀರೆ "
 ಕೊಡಿಟ್ಟ ಪುಡಿಗಾಸಿನ
ಪೆಟ್ಟಿಗೆಯಾಗಿತ್ತು"ಅಮ್ಮನ ಸೀರೆ "

ನೆನೆದು ಬಂದ ತಲೆಯ 
ಒರೆಸುತ್ತಿತ್ತು "ಅಮ್ಮನ ಸೀರೆ "
ಚಳಿಗಾಲದಲ್ಲಿ ಬೆಚ್ಚನೆಯ 
ಕಂಬಳಿಯಾಗಿತ್ತು  "ಅಮ್ಮನ ಸೀರೆ "   


ಹೊತ್ತು ತರುವ ಮಡಿಕೆಗೆ 
ಒತ್ತಡಿಯಾಗಿತ್ತು  "ಅಮ್ಮನ ಸೀರೆ "
ಕಿತ್ತು ತಿನ್ನುವ ದೇಹಕ್ಕೆ 
ರಕ್ಷಣೆಯಾಗಿತ್ತು "ಅಮ್ಮನ ಸೀರೆ "  

ಇಂದಿನ ನಾರಿಗೆ ಸೀರೆ ಎಲ್ಲಿದೆ  
ತುಂಡು  Jeens Jacket ಗಳ ಮೋಹ ಹೆಚ್ಚಾಗಿದೆ  
ಇನ್ನೆಲ್ಲಿದೆ  ಕೈ ವರೆಸುವ ಕರವಸ್ತ್ರ .
ಮುರಿದ ಕಾಲಿಗೆ  ಕಟ್ಟುವ ಬಟ್ಟೆ . 

"ಅಮ್ಮನ ಸೀರೆ "
SATISH N GOWDA   

ಅಂದೊಂದಿತ್ತು "ಅಮ್ಮನ ಸೀರೆ "

ಅಂದೊಂದಿತ್ತು "ಅಮ್ಮನ ಸೀರೆ "
"ಅಮ್ಮನ ಸೀರೆ "

Thursday, December 23, 2010

( ನಿಜವಾದ ಪ್ರೇಮಿಗಳಿಗೆ ಮಾತ್ರ )

 

 

ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು




ಈ ಕಥೆಗಾರನ ಒಂದು ಪ್ರೇಮ ಸಂದೇಶ
ಪ್ರೇಮಿಗಳೆ ಎಚ್ಚರ !
ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು
ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಪ್ರೀತಿ ಅಂದರೆ ಏನು....???
ಪ್ರೀತಿಲಿ ಏನಿದೆ...???
ಅದು ಪ್ರೀತ್ಸೊರಿಗೆ ಮಾತ್ರ ಗೊತ್ತು.ಪ್ರೀತಿ ಅಂದರೆ ಒಂದು ಚಟ.ಸಿಗರೇಟ್ ಸೇದೋದು ಬಿಡು ಅಂದ್ರೆ ಬಿಡಬಹುದು, ಕುಡಿಯೋದು ಬಿಡೋ ಅಂದ್ರೆ ಬಿಡಬಹುದು.ಆದ್ರೆ ಬಿಡಿಸಲಾಗದ ಒಂದೇ ಒಂದು ಚಟ ಅಂದ್ರೆ ಪ್ರೀತಿನೇ. ಪ್ರೀತಿಲಿ ಕಷ್ಟ-ಸುಖ, ನೋವಿ-ನಲಿವು ಎಲ್ಲಾ ಇದೇ ಆದರೆ ಎಷ್ಟೇ ನೋವಿದ್ರು ಅದನ್ನು ಮರೆಸುವಂತಹ ಶಕ್ತಿ ಪ್ರೀತಿಲಿದೆ. ಪ್ರೀತಿಗೊಸ್ಕರ ಯಾರ್‍ಯಾರೋ ಏನೇನೋ ಸಾಧನೆ ಮಾಡ್ತಾರೆ. ಪ್ರೀತಿಗಾಗಿ ಕೈ ಕುಯ್ದುಕೊಂತಾರೆ ಅಪ್ಪ-ಅಮ್ಮನ್ನು ಹೆದರಿಸಿ ಮದುವೆನೂ ಆಗ್ತಾರೆ ಇನ್ನೂ ಸ್ವಲ್ಪ ಜನ ಮುಟ್ಟಾಳರು ಪ್ರಾಣನೇ ಕಳ್ಕೊಳ್ತಾರೆ.ಸತ್ತು ಸಾಧಿಸೋದು ಪ್ರೀತಿ ಅಲ್ಲ ಇದ್ದು ಜಯಿಸೋದೆ ಪ್ರೀತಿ. ಪ್ರೀತಿಲಿ ಮೇಲು ಕೀಳೆಂಬ ಜಾತಿ-ಭೇಧವಿಲ್ಲ,ಬಡವ-ಶ್ರೀ ಮಂತನೆಂಬ ಭೇಧವಿಲ್ಲ.ಎಷ್ಟೋ ತಂದೆ-ತಾಯಿಗಳು ಮಕ್ಕಳ ಭವಿಷ್ಯ ನೋಡದೇ ಬರ್ಈ ಆಸ್ತಿ-ಅಂತಸ್ತು ಎಂಬ ವ್ಯಾಮೋಹದಿಂದ ಪ್ರೇಮಿಗಳನ್ನು ದೂರ ಮಾಡ್ತಾರೆ. ಈ ಕಾಲದಲ್ಲಿ ಹುಡುಗರಿಂದ ಮೋಸ ಹೋಗೋ ಹುಡುಗಿಯರಿಗಿಂತ ಹುಡ್ಗೀರಿಂದ ಮೋಸ ಹೋಗೋ ಹುಡುಗರ್ಏ ಜಾಸ್ತಿ.ಈ ಹುಡ್ಗೀರು ಪ್ರೀತಿ ಮಾಡಬೇಕಾದ್ರೆ ಯಾರ ಮಾತು ಕೇಳಲ್ಲ. ಮದುವೆ ಆಗಬೇಕಾದ್ರೆ ಅಪ್ಪ-ಅಮ್ಮನ ನೆನಪು ಬರುತ್ತೆ.ಮನಸ್ಸು ಕೊಟ್ಟಿದ್ದು ನಾನು ಮರೆತು ಮದುವೆಯಾದೇಯೇನು....???
ಮರೆಯ ಬೇಡವೇ ಹೃದಯಾ ಈ ನನ್ನ ಪ್ರೀತಿಯ
ಕರೆಯ ಬೇಡವೇ ಹೃದಯಾ ಈ ನನ್ನ ಪ್ರಾಣವ !!!
ಹಸಿವೆಂದರೆ ಗೊತ್ತಿಲ್ಲ
ನಿದಿರೇನು ಬರೋದಿಲ್ಲ
ಹಗಲಿರುಳು ತಿಳಿದಿಲ್ಲ
ಹಾಳಾದರು ಪ್ರೀತೀಲ್ ಬಿದ್ದೋರೆಲ್ಲ !!!
ಹುಡುಗರು ಪ್ರೀತಿ ಕೇಳಿದರೇ....
ಹುಡುಗಿಯರು ಪ್ರಾಣವನ್ನೇ ಕೇಳ್ತಾರೆ !!!
ಹಕ್ಕಿ ಮರಿಗಾಗಿ ಮರದಲ್ಲಿ ಗೂಡು ಕಟ್ಟಿದರೆ...
ಹುಡುಗರು ಹುಡುಗಿಯರಿಗಾಗಿ ಮನದಲ್ಲಿ ಗೂಡು ಕಟ್ತಾರೆ !!!
ಪ್ರೀತಿಸೋ ಹುಡುಗರ್ಏ ಇಗೋ ನನ್ನ ಪ್ರೇಮ ಸಂದೇಶ
ನೀವು ಪ್ರೀತಿಸಿದ ಹುಡುಗಿ ನಿಮಗೆ ಸಿಗಲ್ಲಿಲ್ಲ ಅಂತ ಬೇಜಾರು ಮಾಡ್ಕೋಬೇಡಿ ನಿಮ್ಮನ್ನು ಪ್ರೀತಿಸುವ ಹುಡುಗಿ ನಿಮಗೆ ಸಿಕ್ಕೇ ಸಿಕ್ತಾಳೆ.ನಾವು ಪ್ರೀತಿಸಿದ ಹುಡುಗಿ ನನ್ನೇ ಲವ್ ಮಾಡಬೇಕು, ನನ್ನನ್ನೇ ಮದುವೆಯಾಗಬೇಕು ನನ್ ಜೊತೇನೆ ಬಾಳಬೇಕು ಅಂದ್ರೆ ಅದು ಪ್ರೀತಿನೇ ಅಲ್ಲ ಬರ್ಈ ಸ್ವಾರ್ಥ !!! ನಾವು ಪ್ರೀತಿಸಿದ ಹುಡುಗಿ ಎಲ್ಲೇ ಇದ್ರು ಹೇಗೇ ಇದ್ರೂ ಚೆನ್ನಾಗಿ ಇರಬೇಕು ಅನ್ನೋದೇ ನಿಜವಾದ ಪ್ರೀತಿ. ನೀವು ಇಷ್ಟು ತ್ಯಾಗ ಮಾಡಿ ಸಾಕು ನಿಮ್ಮ ಜೀವನವೇ ಸಾರ್ಥಕ ಈ ಪ್ರಪಂಚದಲ್ಲಿ ಸಾವಿರಾರು ಜೀವಿಗಳು ಅದರಲ್ಲಿ ಯಾರ ಪ್ರೀತಿ ಯಾರಿಗೋ....ಯಾರ ಹೃದಯ ಇನ್ಯಾರಿಗೋ....
ಹಾಗೇನೆ ಪ್ರೀತಿಸೋ ಹುಡುಗಿಯರೇ ನಿಮಗೂ ನನ್ನ ಪ್ರೇಮ ಸಂದೇಶ
ಯಾರಾದರೂ ಹುಡುಗರು ಬಂದು ನಿಮಗೆ ಪ್ರಪೋಸ್ ಮಾಡಿದರೆ ನಿಮಗೆ ಇಷ್ಟ ಇದ್ರೆ ಪ್ರೀತಿ ಮಾಡಿ ಇಲ್ಲ ಅಂದ್ರೆ ಆಗೋಲ್ಲ ಅಂತ ನೇರವಾಗಿ ಹೇಳಿ ಪ್ಲೀಸ್ ಸುಮ್ನೆ ಪ್ರಾಣ ಹಿಂಡಬೇಡಿ ಯಾಕಂದ್ರೆ ಹುಡುಗ್ರು ನಿಮ್ಮನ್ನು ಹೃದಯಕ್ಕೆ ಕೊನೆಗೆ ದೇವತೆಗೂ ವರ್ಣನೆ ಮಾಡಿ ಹೋಲಿಸುತ್ತಾರೆ ಜನ್ಮ ಕೊಟ್ಟ ತಂದೆ-ತಾಯಿಗೋಸ್ಕರ ಪ್ರಾಣ ಕೊಟ್ಟಿರೋ ಘಟನೆ ಇತಿಹಾಸದಲ್ಲೆಲ್ಲೂ ಇಲ್ಲ ಅಂತಹದರಲ್ಲಿ ನಿನ್ನೆ ಮೊನ್ನೆ ಬಂದ ನಿಮಗೋಸ್ಕರ ಪ್ರಾಣನೆ ಕೊಡೊಕೆ ಸಿದ್ದವಾಗಿರುತ್ತಾರೆ ಪ್ಲೀಸ್ ಹುಡುಗರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ಬದುಕಲು ಅವಕಾಶ ಕೊಡಿ !!!
ಬದುಕೋರಿಗೆ ಭೂ ಲೋಕ
ಸಾಯೋರಿಗೆ ಯಮಲೋಕ
ಪ್ರೀತ್ಸೋರಿಗೆ ಪ್ರೇಮಲೋಕ
ನಿಮಗಾಗಿ ನನ್ನ ಹೃದಯಲೋಕ
ಪಾರ್ಕು ಸಿನಿಮಾ ಸುತ್ತೋದಲ್ಲಾ ಪ್ರೀತಿ
ಮದುವೆಯಾಗಿ ಮಕ್ಕಳು ಮಾಡೋದಲ್ಲಾ ಪ್ರೀತಿ
ಕಾಫಿ ಡೇಲಿ ಕಾಲ ಕಳೆಯೋದಲ್ಲಾ ಪ್ರೀತಿ
ಕಣ್ಣು ತೆರೆದು ಕನಸು ಕಣೋದೇ ಈ ಪ್ರೀತಿ
ಪ್ರೀತಿ ಎಷ್ಟು ಎತ್ತರವೋ ನಿಜವಾಗಿ ಪ್ರೀತಿಸೋರಿಗೆ ಅದು ಹತ್ತಿರ.........
ಪ್ರೀತಿಗೋಸ್ಕರ ಸಾಯೋದಾಗಲಿ, ಸಾಯಿಸೋದಾಗಲಿ ಇನ್ನೊಬ್ಬರಿಗೆ ನೋವು ಮಾಡುವುದಾಗಲೀ ಮಾಡಿದರೆ ಅದು ಪ್ರೀತಿ ಅಲ್ಲ ಪ್ರೀತಿಗೆ ಮಾಡಿದ ಅವಮಾನ....
ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ....?????

Wednesday, November 24, 2010

ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....


ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....

ಓದುವ ಮುನ್ನ....
ಪ್ರಿಯ ಬ್ಲಾಗಿಗರೇ... ಈ ಲೇಖನವನ್ನು ಪ್ರಕಟಿಸಿದ್ದು ಯಾರ 
ಮನಸ್ಸು ನೊಯಿಸಲಿಕ್ಕಾಗಲಿ ,ಅಥಾವ ಓಲೈಸಲಿಕ್ಕಾಗಲಿ ಅಲ್ಲ. 
ಕೆಲವೊಮ್ಮೆ ಇಂತಹ ಘಟನೆಗಳು ಗೊತ್ತಿದ್ದೊ ಅಥವ ಗೊತ್ತಿಲ್ಲದೆಯೊ 
ನಮ್ಮ ಮದ್ಯ ನೆಡೆದುಹೊಗುತ್ತವೆ ಅಂತಹ ನೂರಾರು ಘಟನೆಗಳಲ್ಲಿ ಇದು 
ಸಹ ಒಂದು. ಹೆಂಗೆಳೆಯರ ಮನಸ್ಸಿನಲ್ಲಿ ನನ್ನ ಮೇಲೆ ಕ್ಷಮೆ ಇರಲಿ.....

             ಸುಮಾರು 8-10  ವರ್ಷಗಳ ಹಿಂದೆ ...ನಾನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ  S S L C  ಓದುತ್ತಿದ್ದ ಸಮಯ School Day ಅಂತ ಒಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಇಟ್ಟುಕೊಂಡಿದ್ದರು ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮೇಡಂ,  ಯಾರಾದರು ಕಥೆ, ಕವನ, ಚುಟುಕು ಹಾಸ್ಯ, ನಾಟಕ, ಇತ್ಯಾದಿಗಳಲ್ಲಿ ಭಾಗವಹಿಸುವವರು ತಮ್ಮ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು ಎಂದು ಮೇಮೊ ಕಳುಹಿಸಿದ್ದರು. ನನ್ನ ತರಗತಿಯ ಹೈದಾರು (ಪಕ್ಕಾ ಲೋ ಕ್ಲಾಸ್) ಹುಡುಗರ ಗುಂಪಿನ ನಾಯಕ ನಾನು , ಎಲ್ಲರೂ ಕುಳಿತುಕೊಂಡು ಕೆಲಕಾಲದ ಚರ್ಚೆಯ ನಂತರ ಒಂದು ನಾಟಕ ಮಾಡಿಯೇ ತೀರುವುದಾಗಿ ನಿರ್ಣಯಸಿದೆವು.

              ನಾಟಕದ ಒಳ ಅರ್ಥ:  1947ರ ಸ್ವಾತಂತ್ರ್ಯಕ್ಕೂ ಮೂದಲು ಭಾರತ ಬ್ರಿಟಿಷರ  ಆಳ್ವಿಕೆಯಲ್ಲಿ ಇದ್ದಾಗ ಭಾರತೀಯರು ಯಾವುದೆ ಸಭೆ, ಸಮಾರಂಭ ನೆಡೆಸುವಂತಿರಲಿಲ್ಲ, ನಾಲ್ಕೈದು ಜನ ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ಮಾತನಾಡುವಂತಿರಲಿಲ್ಲ ಹಾಗು ಯಾವುದೇ ವಿಷಯಗಳನ್ನು ಚರ್ಚಿಸುವಂತಿರಲಿಲ್ಲ. ಹಾಗೇನಾದರು ಅವರ ಮಾತಿಗೆ ಮೀರಿ ನೆಡೆದಿದ್ದಲ್ಲಿ ಬ್ರಿಟೀಷ್ ಕಾರ್ಯಕರ್ತರು ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಅರ್ಥ ಬಿಂಬಿಸುವಂತ ನಾಟಕ ಆಡುವುದು ಎಂದು ನಮ್ಮ-ನಮ್ಮಲ್ಲಿ ತೀರ್ಮಾನಿಸಿಕೊಂಡೆವು ಅದಕ್ಕೆ ಎಲ್ಲರ ಸಮ್ಮತಿಯು ಇತ್ತು. ಸರಿ next day ಇಂದ ನಾಟಕದ ಪ್ರಾಕ್ಟೀಸ್ ಶುರುವಾಯಿತು.

            ನಾಟಕದ ಅಂತಿಮ ಪ್ರಾಕ್ಟೀಸ್:ಎಲ್ಲಾ ಪ್ರಾಕ್ಟೀಸ್ ಮುಗಿಯಿತು ನಾವೊಂದು ನಾಲ್ಕೈದು ಜನ ರಸ್ತೆಯಲ್ಲಿ ಮತಾನಾಡುತ್ತಿದ್ದಾಗ ಬ್ರಿಟಿಷ  ಅದಿಕಾರಿಯಾದ ನೀನು ನಮ್ಮನ್ನು "ಆ.... ಡಮಾರ್. ಆ ಡಮಾರ್....." ಎಂದು ಪಿಸ್ತೂಲಿನಿಂದ ಕೊಲ್ಲ ಬೇಕು ಎಂದು "ರವಿ" ಯನ್ನು ನೇಮಿಸಿದೆವು. ಅವನಿಗೆ ಸ್ವಲ್ಪ ನಾಲಿಗೆ ತೊದಲಿತ್ತು. ಅವನಿಗೆ ಎಷ್ಟು ಹೇಳಿಕೊಟ್ಟರು ನಾಯಿಬಾಲ ಡೊಂಕು ಎಂಬಂತೆ ಆ..... ಡಗಾರ್. ಆ ಡಗಾರ್.... ಎನ್ನುತ್ತಿದ್ದ. ಡಗರ್ ಎಂದರೆ ಅಗಷ್ಟೆ ವೇಶ್ಯಚಾರಿಣಿ ಎಂಬ ಅರ್ಥಕ್ಕೆ ಮಾರ್ಪಾಡುತ್ತಿದ್ದ ದಿನಗಳು ಅವು. ಇದನ್ನೆಲ್ಲ ಅರಿಯದ   ಮುಗ್ದ ಮನಸ್ಸಿನ ಪುಟ್ಟ ಯುವಕರಾದ ನಾವು  ನಾಟಕ ಪ್ರದರ್ಶಿಸುವ ದಿನ ಬಂದೇ ಬಿಟ್ಟಿತ್ತು.
            
              ನಾಟಕದ ಸ್ಟೇಜಿನಲ್ಲಿ: ಅಂದಿನ ದಿನ ಒಂದು ರೀತಿಯ ಭಯ, ಅತಂಕ ನಮ್ಮಲ್ಲಿ ಮನೆ ಮಾಡಿತ್ತು. " ರೋಗಿ ಬಯಸಿದ್ದು ಹಾಲು,ಅನ್ನ. ಡಾಕ್ಟರ್ ಹೇಳಿದ್ದೂ ಹಾಲು, ಅನ್ನ" ಎನ್ನುವ ಹಾಗೆ ನಮ್ಮ ಹೆಸರನ್ನು ಕೊನೆಯಲ್ಲಿ ಸೇರಿಸಿದ್ದರು. ನಾಟಕ ಶುರುವಾಯಿತು 15 ನಿಮಿಷಗಳ ನಮ್ಮ ನಾಟಕವನ್ನು ನೋಡಲು ಜನರು ಹುಮ್ಮಸ್ಸಿನಿಂದ ಕೇಕೆ ಹಾಕುತ್ತಿದ್ದರು ( ನಾಟಕದ ವಿಷಯ ಪಾಪ ಅವರಿಗೊ ಗೊತ್ತಿಲ್ಲ)  ನಾವು ರಸ್ತೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅದಿಕಾರಿಯಾದ ರವಿ ನಮ್ಮನ್ನು ಗುರಿಯುಟ್ಟು ಆ....ಡಗಾರ್. ಆ.....ಡಗಾರ್ ಎನ್ನುತ್ತಿದ್ದರೆ ಅಲ್ಲಿದ್ದ ಅಷ್ಟು ಜನ ಸಿಳ್ಳೆಹೊಡೆದು ನಗುತ್ತಿದ್ದರು. ಮುಂದಿನ ಸೀಟುಗಳಲ್ಲಿ ಕುಳಿತ ಹುಡುಗಿಯರತ್ತ ಪಿಸ್ತೂಲ್ ಗುರಿಮಾಡಿ ಆ...ಡಗಾರ್. ಆ....ಡಗಾರ್ ಎನ್ನುತ್ತಿದ್ದಾಗ ಹುಡುಗಿಯರು ಕೂಡ ಕೇಕೆ ಹಾಕಿ ನಗುತ್ತಿದ್ದರು. ಅಷ್ಟೇ ಆದರೆ ಜನ enjay ಮಾಡಿ ನಕ್ಕು ಮನೆಗೆ ಹೋಗುತ್ತಿದ್ದರೋ ಎನೋ..! ಅದರೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಮೇಡಂ ಕಡೆಗೊ ಗುರಿಮಾಡಿ ಆ....ಡಗಾರ್. ಆ..ಡಗಾರ್ ಎಂದ. ಅಲ್ಲಿದ್ದ ಅಷ್ಟೊ ಜನ ಶಿಕ್ಷಕರೂ ಸೇರಿ ನಗಲು ಪ್ರಾಂರಬಿಸಿದರು. ನಾಟಕ ಮುಗಿಯುತು ಅವರೆಲ್ಲ ಎದ್ದು ಮನೆಗೆ ಹೊರಟು ಹೋದರು ನಮಗೆ ಕಾದಿತ್ತು "ಮಾರಿ ಹಬ್ಬ"
       
             next day : ನಾವೆಲ್ಲ ನಾರ್ಮಲ್ ಹಾಗಿ ಶಾಲೆಗೆ ಹೊದೆವು ಹುಡುಗರೆಲ್ಲ ನಮ್ಮ ನಾಟಕ ಮೆಚ್ಚಿಕೊಂಡಿದ್ದರು ಬೆಳಗಿನ ಪ್ರಾರ್ಥನೆ ಮುಗಿದು ಶಾಲೆಗೆ ಹೊಗುವ ಸಮಯದಲ್ಲಿ ಸತೀಶ್ ಅವನ ಗ್ರೂಪ್ ಪ್ರಾಂಶುಪಾಲರನ್ನ ಕಾಣತಕ್ಕದ್ದು ಎಂದು ಮೇಮೋ ಕಳಿಹಿಸಿ ಕರೆಸಿಕೊಂಡರು. ಕಾರಣ ಗೊತ್ತಿರಲಿಲ್ಲ ಹೊಳಗಿದ್ದ ಮೇಡಂ ಬಡ್ಡಿಮಕ್ಳ ನನ್ನನ್ನೇ "ಡಗಾರ್" ಅಂತ ಕರೀತಿರಾ.... ಅಂತ ಹೇಳಿ, ನಾಟಕ ಮಾಡಿದ ತಪ್ಪಿಗೆ ಬಾಸುಣಿಗೆ ಬರೊ ತರ ಹೊಡೆದು ಕಿವಿ  ಹಿಡಿದು ದಿನವಿಡೀ ಕುರ್ಚಿಯಲ್ಲಿ ಕುಳ್ಳರಸಿದ್ದರು. 

SATISH N GOWDA

ಎಲ್ಲಿರುವೆ ನೀ ಚಲುವೆ


ಎಲ್ಲಿರುವೆ ನೀ ಚಲುವೆ

ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ.. ಏನೋ.. ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೋಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

ಎಲ್ಲಿರುವೆ ನೀ ಚಲುವೆ
SATISH N GOWDA 

ನಿನ್ನ ಪ್ರೀತಿಗೆ ದಾಸನಾಗಲು..?

  
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಸುಂದರ ರೂಪ
ನನ್ನ ಕನಸಲ್ಲಿ ಬಂದು
ನ್ನನ್ನೆಲ್ಲ ರಾತ್ರಿಗಳನ್ನು
ಒಂದೇ ಸಮನೆ ಲೋಟಿ ಮಾಡುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರಿಯತಮನಾಗಲು..?

ಜೇನಿನ ಹನಿಯಂತ ನಿನ್ನ ಪ್ರೀತಿ
ನ್ನನ್ನೀ ಹೂವಿನಂತ ಮನಸ್ಸುನ್ನು
ಸದ್ದಿಲ್ಲದೇ ದಿನೇ ದಿನೇ ದೋಚಿ ಹೊಯ್ಯುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ಸದಾ ನಿನ್ನದೇ ನೆನಪುಗಳು
ನನ್ನ ಈ ಪುಟ್ಟ ಹೃದಯದಲ್ಲಿ
ದಿನಕಳೆದಂತೆ ರಾಶಿಯಾಗುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ಶರಣಾಗಲು..?

ನಾಳಿನ ಕನಸುಗಳನ್ನು ಹೊತ್ತ ನನ್ನೀ ದೇಹ
ದಿನ ಬೆಳಗಾಗುವುದುರೊಳಗಾಗಿ
ನಿನ್ನ ನೆನಪುಗಳೊಂದಿಗೆ ಮಿಲನವಾಗುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಪ್ರೀತಿಗೆ ದಾಸನಾಗಲು..?
SATISH N GOWDA

Friday, November 12, 2010

ನೆಚ್ಚಿನಗೆಳತಿಗೊಂದು ಆಹ್ವಾನ


ನೆಚ್ಚಿನಗೆಳತಿಗೊಂದು ಆಹ್ವಾನ

ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..

ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.

ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.

ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.

ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ


ನೆಚ್ಚಿನಗೆಳತಿಗೊಂದು ಆಹ್ವಾನ
SATISH N GOWDA

Thursday, November 11, 2010

ಅವಳು ನನ್ನಾಕೆ...


ಅವಳು ನನ್ನಾಕೆ... 
ಹುಣ್ಣಿಮೆಯ ರಾತ್ರಿಯಲ್ಲಿ
ನಿಂತಿದ್ದ ಸುಂದರ ಹುಡುಗಿಯ
ಸೌಂದರ್ಯದ ಸೊಬಗನ್ನು ಕಂಡು
ಚಂದಿರನೂ ಕೂಡ ಒಮ್ಮೊಮ್ಮೆ ಕಣ್ಣು ಮಿಟಿಕುಸುತ್ತಿದ್ದ
ಬಹುಶಃ ಇರಬೇಕು ಅವಳು ನನ್ನಾಕೆ..!

ಬೆಳ್ಳಂಬೆಳಗಿನ ಮುಂಜಾನೆಯಲ್ಲಿ
ಜುಳು ಜುಳು ಹರಿಯುವ ಜಲಧಾರೆಯಲಿ
ಮಿಂದು ಬರುತ್ತಿದ್ದ ಯುವತಿಯ ಕಂಡ
ಆ ಸೂರ್ಯನೂ ಒಂದು ಕ್ಷಣ ಕೆಂಪಾಗಿದ್ದ
ನನಗನಿಸುತ್ತೆ ಅವಳು ನನ್ನಾಕೆ..!

ಇಂದ್ರಲೋಕದ
ರಂಗು ರಂಗುನ ನೃತ್ಯಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು
ಬಹುಶಃ ಇರಬೇಕು ಅವಳು ನನ್ನಾಕೆ..!

ಕಡು ಕಗ್ಗತ್ತೆಲೆಯ ನಡು ರಾತ್ರಿಯಲಿ
ಧರೆಗಿಳಿದ ದೇವತೆಯ
ಮೋಹಕ ಕಣ್ಣುಗಳನೋಟಕ್ಕೆ
ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಒಮ್ಮೆ ಮೋಹ ಉಂಟಾಯಿತು
ಬಹುಶಃ ಇರಬೇಕು ಇವಳು ನನ್ನಾಕೆ..?


SATISH N GOWDA

Wednesday, November 10, 2010

ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

 (ಚಿತ್ರ ಕೃಪೆ ಅಂತರ್ಜಾಲ )
ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

           ತುಂಭಾದಿನಗಳಿಂದ (ಸೆಪ್ಟೆಂಬರ್ ತಿಂಗಳಿನಿಂದ) ಈ ಘಟನೆ ನನ್ನ ಮನಸಿನಲ್ಲಿತ್ತು ಏಕೋ ಎನೋ ಬರವಣಿಗೆಯ ರೂಪ ಕೊಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಒಲ್ಲದ ಮನಸ್ಸಿನಿಂದ ಈ ಘಟನೆಗೊಂದು ಲೇಖನ ರೂಪ ಕೊಡುವ ಪ್ರಯತ್ನದಲ್ಲಿ.....
        ಓದುವ ಮುನ್ನಾ...... ಗೊತ್ತಿಲ್ಲದೆ ನೆಡದ ಈ ಘಟನೆಯ ಕಥಾನಯಕಿಗೆ ಕ್ಷಮೇಯಾಚಿಸುತ್ತಾ..

                                             ಅಳಿದುಳಿದ ನೆನಪಿನೊಂದಿಗೆ ಘಟನೆ ಹೀಗಿದೆ  ,,,,,,,
         ಪ್ರತಿತಿಂಗಳು ಕೆಲವು ಮಾಸ ಪತ್ರಿಕೆಗಳನ್ನು(ರೂಪತಾರ, ಗೃಹಶೋಭ.ಚಿತ್ತಾರ. ಇತ್ಯಾದಿ..) ಕೊಂಡು ಓದುವ ಅಭ್ಯಾಸ ನನ್ನದು. ಅದೇ ರೀತಿ ಸೆಪ್ಟಂಬರ್ ತಿಂಗಳ ರೂಪತಾರ ಪತ್ರಿಕೆಯನ್ನು ತೆಗೆದು ಕೊಳ್ಳುವ ಎಂದು ನಮ್ಮ ಮನೆಯ ಪಕ್ಕದಲ್ಲೆ ಇದ್ದ ಒಂದು ಪುಸ್ತಕ ಮಳಿಗೆಗೆ ಬೇಟಿ ಕೊಟ್ಟೆ ನನ್ನ ದುರಾದೃಷ್ಟಕ್ಕೆ ಆ ಮಳಿಗೆಯಲ್ಲಿ ಅವತ್ತು ಒಂದು ಸುಂದರ ಹುಡುಗಿ ಇದ್ದಳು. ರೂಪತಾರವನ್ನು ನೋಡುತ್ತಾ ಅದರಲ್ಲಿರುವ ದಪ್ಪನೆಯ ಒಂದು ಕವರ್ ಕಣ್ಣಿಗೆ ಬಿತ್ತು(ಪುಸ್ತಕದ ಒಳಗಡೆ ಪ್ಯಾಕಿಂಗ್ ಮಾಡಲಾಗಿತ್ತು ) ಅದನ್ನು ವಿಚಾರಿಸಲು ಸಲುವಾಗಿ,
ನಾನು : ರೀ ಈ ಪುಸ್ತಕದಲ್ಲಿ ಏನಿದೆ
ಹುಡುಗಿ: ನೀವೇ ಓದಿ ಸರ್.
ನಾನು : ಅದು ಸರಿ ರಿ ಪುಸ್ತಕ ಪ್ಯಾಕಿಂಗ್ ಆಗಿದೆಯಲ್ಲ ..?
ಹುಡುಗಿ: Open ಮಾಡಿ ನೋಡಿ ಸರ್ (ನಗೆಮುಖದಿಂದ)
ನಾನು: ದುಡ್ಡು ಕೊಡದೆ Open ಮಾಡಬಹುದಾ..?
ಹುಡುಗಿ: ಹಾಗೆಲ್ಲಾ ಅಗೋಲ್ಲ ಸರ್ ದುಡ್ಡುಕೊಟ್ಟೆ Open ಮಾಡಬೇಕು ( ಕೋಪದಿಂದ)
ನಾನು : ಅದು ಸರಿ ರಿ ನೋಡಬೇಕಲ್ಲ ಒಳಗೇನಿದೆ ಅಂತ..!
ಹುಡುಗಿ: ಮನೆಗೆ ತಗೊಂಡು ಹೋಗಿ ನೋಡಿಸರ್ (ಮತ್ತೆ ಕೋಪದಿಂದ)
ನಾನು : ಸರಿ ಕೋಡಿ .
             ಇಷ್ಟೇಲ್ಲ ಆದರೂ ಪುಸ್ತಕದ ಒಳಗಡೆ ಏನಿದು ಎಂದು ಗೊತ್ತಾಗಲಿಲ್ಲ. ಅಲ್ಲಿಂದ ಮನೆಗೆ ಬಂದು Open ಮಾಡಿದರೆ ಶಾಕ್ ಒಳಗಡೆಇದ್ದದ್ದು "Wisper " .  ಸಂಚಿಕೆಯ ಮುಖಪುಟದ ಮೇಲೆ "ಈ ಸಂಚಿಕೆಯೊಂದಿಗೆ ಒಂದು "Wisper " ಉಚಿತ" ಎಂದು ಬರೆದಿತ್ತು. ..! ಅಯ್ಯೋ.. ದೇವರೆ ಸುಮ್ಮ-ಸುಮ್ಮನೆ ಒಂದು ಹುಡುಗಿಯ ಮನಸ್ಸು ನೊಯಿಸಿಬಿಟ್ಟೆನಲ್ಲ ಎಂದು ಕೊಂಡು ...... ನಾನು ಹೇಗಿದ್ರು ಬ್ಯಾಚುಲರ್ ನನಗೇನಕ್ಕೆ ಇದು,  ಸರಿ ಇದನ್ನು ಅವಳಿಗೇ ಕೊಟ್ಟು Sorry ಕೇಳಿಕೊಂಡು ಬರುವ ಎಂದು ಹೊರಟೆ.
ನಾನು: ಸಾರಿ ರಿ..
ಹುಡುಗಿ: ಮೌನ (ಕೋಪದ ಕಣ್ಣುಗಳಿಂದ)
ನಾನು : ನಿಜವಾಗಲು ನನಗೆ ಗೊತ್ತಿರಲಿಲ್ಲ.
ಹುಡುಗಿ: ಮೌನ (ಮುಗುಳ್ನಕ್ಕು)
ನಾನು : ಇದು ನನಗೆ ಬೇಡ ನೀವೆ ಇಟ್ಕೊಳ್ಳಿ.
ಹುಡುಗಿ: ಕೋಪದಿಂದ ನೋಡುತ್ತಾ (ಒಂದು ಲುಕ್ ಕೊಟ್ಟು ತಲೆಬಗ್ಗಿಸಿಕೊಂಡಳು)
        ಸರಿ ಒಲ್ಲದ ಮನಸ್ಸಿನಿಂದ ಆ ಕವರ್ ಅನ್ನು  ಅಲ್ಲಿಟ್ಟು ಹೊರಟೆ ಆ ದಿನದಿಂದ ಇವತ್ತಿನ ವರೆಗೊ ಆ ಹುಡುಗಿ ನನ್ನ ನೋಡಿದ ತಕ್ಷಣ ಮೌನವಾಗುತ್ತಾಳೆ....... ಕಾರಣ ಗೊತ್ತಿಲ್ಲ..! ಘಟನೆ ನೆಡೆದು ತಿಂಗಳುಗಳು ಕಳೆದರು ನನ್ನನ್ನು ಕಂಡ ಅವಳಿಗೆ ,ಅವಳನ್ನು ಕಂಡ ನನಗೆ ಆವರಿಸುವ  ಮೌನ ಮಾತ್ರ ದೂರವಾಗಿಲ್ಲ.


ಪ್ರಿಯ ಸ್ನೇಹಿತರೆ ಈ ಲೇಖನ ಓದಿದ ನಿಮಗೆ ಏನನಿಸುತ್ತದೊ 
ಒಂದು ಕಾಮೆಂಟ್ ಮೂಲಕ ತಿಳಿಸಿ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ.

SATISH N GOWDA

Sunday, November 7, 2010

ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ ...

(ಚಿತ್ರ ಕೃಪೆ ಅಂತರ್ಜಾಲ)

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?



       ರೀ ....... !ಮೇಡಂ ಸುತ್ತಿ ಬಳಸಿ ಯಾಕ್ರಿ ಮಾತು ! ಇದ್ದದ್ದು ಇದ್ದಂಗೆ ಹೇಳಿಬಿಡ್ತೀನಿ ಕೇಳಿ. ... ನಾನು ನಿಮ್ಮನ್ನು ಪ್ರೀತಿಸ್ತಾ ....! ಇದೀನಿ ನಿಮ್ಮ ಮೇಲೇ ನಂಗೆ ಹಾಳಾದ್ದು ಮೋಹ ಶುರು ಆಗಿದೆ . ಸ್ವಲ್ಪ ದಿನಗಳ ಹಿಂದೆ  ಅವತ್ತು ವಿಜಯನಗರದ ಅಯ್ಯಂಗಾರ್ ಬೇಕರಿಗೆ ಅಂತ  ಬಂದಿದ್ರೆಲ್ವ ಅವಾಗ ನಾನು ನಿಮ್ಮನ್ನ ನೋಡಿದೆ ಕಣ್ರೀ.! ತ್ಹೊಥ್ ಅವತ್ತಿನಿಂದ ನನ್ನ ಮನುಸು ನನ್ನ ಮಾತೇ ಕೆಳ್ತಿಲ್ಲ ಕಣ್ರೀ ........ ..!ಅವತ್ಹ್ಹು ನಿಮ್ಮನ್ನ ನೋಡಿದ ಕ್ಷಣ ದಿಂದ ಹೇಗಾದರು ಮಾಡಿ ನಿಮ್ಮನ್ನ ಮಾತಾಡ್ಬೇಕು ಅಂತ ಅನಿಸುತ್ತೆ ಆದರೆ ಹಾಳಾದ್ದು ದ್ಯರ್ಯ  ಇಲ್ಲ ಕಣ್ರೀ .ಅದರೂ  ಕೊಡ ನಿಮ್ಮ ಮೇಲಿನ ಪ್ರೀತಿ ದಿನೇ ದಿನೇ ಜಾಸ್ತಿ ಅಗ್ಥಇದಿಯಲ್ಲ ಇದಕ್ಕೆ ಏನಂಥ ಕರೀಬೇಕೂ ಅರ್ಥನೇ ಆಗ್ತಿಲ್ಲ ಕಣ್ರೀ ..!
           ರೀ .. ಮೇಡಂ ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ  ನಮ್ಮ ಊರಲ್ಲೇ ಸ್ವಲ್ಪ ಹುಷಾರಾಗಿ ಹುಡಿಕಿದರೆ ನಿಮಗಿಂತ ಸುಂದರ ವಾಗಿರೋ ಹುಡಿಗೀರು ದೇವರಾಣೆಗೂ ಸಿಕ್ತಾರೆ ಆದ್ರೆ ಏನ್ ಮಾಡೋದು ನನ್ನ ಮನಸು ನೀವೇ ಬೇಕು ಅಂತ ಕೇಳ್ತಿದೆ  .! ನೀವು ನೋಡಿದ್ರೆ ದೂರದಲ್ಲಿರೋ ಅಯ್ಯಂಗಾರ್ ಬೇಕರಿಗೆ ಬರ್ತಿರ . ಅಲ್ಲಿ ಸರಿಯಾಗಿ ಇಪ್ಪತೈದು  ನಿಮಿಷ ವ್ಯಾಪಾರ ಮಾಡಿ ಹೋಗಿಬಿಡ್ತಿರಾ ಆಗೆಲ್ಲ ನಂಗೆ ಅದಿಷ್ಟು ಸಂತೋಷ ಆಗುತ್ತೆ ಗೊತ್ತ ಮೇಡಂ ....? ಇಡೀ ದಿನಾ ನಿಮ್ಮನ್ನೇ ನೋಡೋ ಆಸೆ !ಹಾಗೆ ನೋಡ್ತಾ ಇರಬೇಕು ಅನಿಸುತ್ತೆ ........!
        ಮೊನ್ನೆ ದೀಪಾವಳಿ ಬಂತಲ್ಲ ಅವತ್ತು ಏನಾಯ್ತು ಗೊತ್ತಾ ಮೇಡಂ .....?
ದಿಪಾವಳಿಗೆ ಅಂತ ರಜೆ ಸಿಕ್ತಲ್ಲ . ಅ ನೆಪದಲ್ಲಿ ಆರಾಮಾಗಿ ಊರಿಗೆ ಹೊರಟೆ ಚಿಕ್ಕಬಳ್ಳಾಪುರ ತಲುಪಿದ್ದೆ  ತಡಾ ಇದ್ದಕಿದ್ದಂತೆ ನಿಮ್ಮ ನೆನಪಾಯಿತು ಸರಿ ಹೇಳಿ .. ಕೇಳಿ .. ದೀಪಾವಳಿ ರಜೆ ಇದೆಯಲ್ಲ ? ಆ ನೆಪದಲ್ಲಿ ನೀವು ಅಯ್ಯಂಗಾರ್ ಬೇಕರಿಗೆ ಬಂದೇ.. ಬರ್ತೀರಾ.. ಹಾಗೆ  ಬಂದವರು ಇಪ್ಪತೈದು  ನಿಮಿಷ ವ್ಯಾಪಾರ ಮಾಡಿ ಅವತ್ಹ್ಹು ಸಂಜೆ ಪಟಾಕಿ ಹೊಡಿಯೋ ನೆಪದಲ್ಲಿ ಮನೆ ಇಂದ ಹೊರಗೆ ಇರ್ತಿರಾ ಅನ್ನಿಸಿಬಿಡ್ತು , ನಿಮ್ಮನ್ನು ನೋಡಲೇ ಬೇಕು ಹೇಗಾದರು ಮಾಡಿ ಮಾತಾಡಿಸಲೇ ಬೇಕು ಅನಿಸ್ಥ್ಹು ಕಣ್ರೆ .. ಮತ್ತೆ ವಾಪಸು ಅದೇ ವಿಜಯನಗರದ ಅಯ್ಯಂಗಾರ್ ಬೇಕರಿ ಗೆ ಬಂದೇ , ಸಂಜೆ ಬೇಕರಿ ಅತ್ರ ನಿಮ್ಮನ್ನು ನೋಡಿದೆ ದೂರದಿಂದಲೇ ಒಂದು ಲುಕ್ ಕೊಟ್ಟೆ . ನಿಮಗೆ ಕಾಣಿಸುವ ಹಾಗೆ ಒಂದು ಸ್ಮೈಲ್ ಕೊಟ್ಟೆ . ನೀವು ನನ್ನ ನೋಡ್ತಿರೋ ಹಾಗೆ ಒಮ್ಮೆ ಕಣ್ಣು ಹೊಡೆದೆ .. ನೀವು ಏನೂ ಅನ್ನಿಲಿಲ್ವಲ್ಲ ಅದನ್ನು ಕಂಡು ನನೆಗೆ ಸ್ವಲ್ಪ ದ್ಯರ್ಯ ಬಂತು ಕಣ್ರೆ ,,,,,,, ಅವತ್ತ್ತು ರಾತ್ರಿ ನೋಡಿದ್ರೆ ನಿಮ್ಮ ಇಂದೇ ಮುಂದೆ ನಿಮ್ಮ ಅಣ್ಣ ಇದ್ರೂ ಮೇಡಂ ... ನಾನು ಹೇಗೆ ನಿಮ್ಮನ್ನ ಮಾತಾಡಿಸಲು ಸಾದ್ಯ ಹೇಳಿ ? ಅವರು ನನಗಿಂತ ಸಿನಿಯರ್ ಗಳು ಧಹಿಕವಾಗಿ - ಆರ್ಥಿಕವಾಗಿ ಕೊಡ ನನಗಿಂತ ಜೋರಗಿದ್ರು . ನಾನೇನಾದ್ರು ಅವತ್ಹ್ಹು ನಿಮ್ಮನ್ನ ಮಾತಾಡಿಸಿದರೆ ನನ್ನ ಮೊಳೆ  ಮುರಿತಿದ್ರು ಅನಿಸುತ್ತೆ , ಹಾಗಾಗಿ ನಾನು ಏನೋ ಮಾತಾಡದೆ ವಾಪಸ್ಸು ಬಂದೇ ........!
 ಆದರೆ ಇವಾಗ ಯಾವ ಭಯನು ಇಲ್ಲ .....! ಇವಾಗ ಹೇಳ್ತಿನೆ ಕೇಳಿ ನಾನು ನಿಮ್ಮನ್ನ ತುಂಬಾ ಪ್ರಿತಿಸ್ಥಾ ಇದೀನಿ ಕಣ್ರೆ ....ನೀವು ಇಲ್ಲ ಅಂದ್ರೆ ನಾನು ಸತ್ತೆ ಹೋಗ್ತೀನಿ ಕಣ್ರೀ ........!
         ನಿಮ್ಮ-ನನ್ನ ಪ್ರೀತಿಯ ವಿಷಯ ಹೇಗೂ ನಿಮ್ಮ ಮನೆಯವರಿಗೆ ಗೂತ್ತಾಗಿ ಹೋಗಿದೆ ನನ್ನನ್ನ ಕರೆದು ಎಚ್ಚರಿಕೆ ಕೊಟ್ಟಿದ್ದಾರೆ .ನನ್ನ ಮಗಳ ತಂಟೆಗೆ ಬರಬೇಡ.....!ಬಂದ್ರೆ ಕಾಲೂ ಕೈ ಮುರೀತೀನಿ ... ನಿನ್ನದು ಯಾವ ಊರೂ.. ...ಯಾರೂ ನೀನು...!ನನ್ನ ಮಗಳನ್ನು ಪ್ರಿತಿಸಬೇಡ ದ್ವೇಷಿಸು ಅಂತ ನನ್ನ ಮನಸಿಗೆ ನೋವಗೂ ಥರ ನಡೆದುಕೊಂಡಿದ್ದಾರೆ .....!
                ಅದ್ರು .....ಮೇಡಂ ..... ನಾನು ನಿಮ್ಮನ್ನು ದ್ವೆಶಿಶಲಾರೆ ಅದರ ಬದಲು ನಾನು ನಿಮ್ಮನ್ನು ಪ್ರೀತಿಸ್ತೀನಿ .... ಇವತ್ತಲ್ಲ ನಾಳೆ ದ್ಯರ್ಯ ತಂದುಕೊಂಡು ನಿಮ್ಮದೆರು ನಿಂತು "I LOVE U" ಅಂತ ಹೇಳೇ  ಹೇಳ್ತೀನಿ....!ಅಲ್ಲಾ ರೀ ನಿಮ್ಮ ತಂದೆ ಪ್ರಿತಿಸ್ಬೇಡ ನನ್ನ ಮಗಳನ್ನ ದ್ವೇಷಿಸು ಅಂತ ಹೇಳ್ತಾರಲ್ಲ .ನನ್ನೆದೆಯ ತುಂಬಾ ಪ್ರೀತಿ ಇರುವಾಗ ನಾನು ಹೇಗೇ ರೀ ನಿಮ್ಮನ್ನ ದ್ವೆಶಿಸಲಿ ......?


cell 9844773489

Sunday, October 31, 2010

ನಿನ್ನಯ ನೆನಪು...

 (ಚಿತ್ರ ಕೃಪೆ ಗೂಗೆಲ್ )
ನಿನ್ನಯ ನೆನಪು...
ಮರೆತಿಲ್ಲ ನಾ ನಿನ್ನನ್ನು
ಮರೆಯಲು ಸಾಧ್ಯವಿಲ್ಲ ನಿನ್ನಯ ನೆನಪನ್ನು
ನಿನ್ನ ನೆನಪೊಂದೆ ನನ್ನ ಜೀವ
ಹೇಗೆ ಮರಯಲಿ ಗೆಳತಿ ನಾ ನಿನ್ನನ್ನ..?

ಹತ್ತಿರದಲ್ಲಿ ನೀನಿಲ್ಲ
ನಿನ್ನಯ ನೆನಪು ನನ್ನದೆಯಲ್ಲಿ ಮಾಸಿಲ್ಲ
ಮರೆತರೂ ಮರೆಯಲಾಗದ ನೆನಪು ನೀ ಕೊಟ್ಟ ಪ್ರೀತಿ
ಹೇಗೆ ಮರೆಯಲಿ ಹೇಳು ನೀ ಕೊಟ್ಟ ಪ್ರೀತಿಯ ಬಳ್ಳಿಯನ್ನ..?

ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?

ನೀ ಕೊಟ್ಟ ಪ್ರೀತಿಯ ನೆನಪಿನ ದೀಪದಿಂದ
ಜಗತ್ತನ್ನೇ ಬೆಳಗಿಸಲು ಹೊರಟಿರುವ ಹುಚ್ಚು ಮನಸ್ಸು ನಂದು
ಹುರಿದುಂಬಿಸಲು ನೀನಿಲ್ಲ, ಹಿಂತಿರುಗಲು ಮನಸಿಲ್ಲ
ಹೇಳು ಗೆಳತಿ ಮುಂದೇನು ಮಾಡಲಿ..?

ಕಣ್ಣ ಬಿಟ್ಟರೆ ನೀ ಕಾಣಲ್ಲ
ಕಣ್ಣು ಮುಚ್ಚಿದರೆ ನಿನೇ ಎಲ್ಲಾ
ನಿನ್ನ ನೆನಪಿನ ವೇದನೆ ಪಾತಳಕ್ಕಿಂತ ಆಳ
ಅನುಭವಿಸುವ ನನಗೇ ಗೊತ್ತು ಅದರ ಯಾತನೆ
ಹೇಗೆ ಮರೆಯಲಿ ಹೇಳು ಗೆಳತಿ ನಾ ನಿನ್ನನ್ನ..?


ನಿನ್ನಯ ನೆನಪು...
SATISH N GOWDA 

Friday, October 29, 2010

ದೇವರವ್ನೆ ನೀ ನೈಂಟಿ ಹೊಡಿ


ದೇವರವ್ನೆ ನೀ ನೈಂಟಿ ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಒಳ್ಳೆ ಕಾರ್ಡು ಬಿತ್ತು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ತು ಅಂದ್ರೆ, ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ ಕಳ್ನನನ್ಮಗಂದು
ನಾವಾಡಬೇಕು ದೇವರನ್ನೇ ನೆಚ್ಚಿಕೊಂಡು

ಒಂದೇ ಆಟ ಒಂದೇ ಆಟ ಎಂದುಕೊಂಡು ಎಂಡಿನಲ್ಲಿ
ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು

ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ಸಾಯಬೇಡ ಅಷ್ಟು ಬೇಗ
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ ನೈಂಟಿ ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಯಾವ್ದು ಇಲ್ಲಿ ಅಂದರ್ ಆಯ್ತು
ಯಾವ್ದು ಇಲ್ಲಿ ಬಾಹರ್ ಆಯ್ತು
ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವು ಗ್ಯಾಪು ಕೊಡದೆ ಆಡಬೇಕು ಮುಚ್ಚಿಕೊಂಡು

ಸಿಂಪಲ್ ಮಂದಿ ನಾವ್ ಶೋಕಿಗಂತ ಆಡುತೀವಿ
ಹೆದ್ರೋಲ್ಲ ಮನೆ-ಮಠ ಮಾರಿಕೊಂಡ್ರು
ಪಾಪ ಪಾಂಡವರೇ ಹೆಂಡ್ತೀನ ಕಳಕೊಂಡ್ರು

ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
ಸಾಲ, ಜಾಸ್ತಿ ಆದ್ರೆ ಆಗ್ಲಿ ಬಿಡಿ
ದೇವರವ್ನೆ ಮನೆ ಮಾರಿ ಬಿಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ

SATISH N GOWDA 

Wednesday, October 20, 2010

ನೀ ನನ್ನ ಪ್ರೀತಿಯ ದೇವತೆ ಕಣೇ....

ನೀ ನನ್ನ ಪ್ರೀತಿಯ ದೇವತೆ ಕಣೇ...

        ಓದುವ ಮುನ್ನ.....
ಇದು ಕೇವಲ ಕಾಲ್ಪನಿಕ ಬರವಣಿಗೆ  
ಯಾರ ಜಿವನಕ್ಕೋ ಸಂಬಂದ ಪಟ್ಟಿರುವುದಿಲ್ಲ
ಇದುನ್ನು ಕೇಳುವ ಹಕ್ಕು ಯಾವುದೇ ಹುಡುಗಿಗಾಗಲಿ 
ಅಥವಾ  ಯಾವುದೇ ಮಹಿಳೆಗಾಗಲಿ    ಇರುವುದಿಲ್ಲ  ..
(ಚಿತ್ರಗಳು ಅಂತರ್ಜಾಲದಿಂದ  ಆಯ್ದುಕೊಳ್ಳಲಾಗಿದೆ ) 
                 ಹಾಯ್ ಸುಷಿ.. ( ನಾ ನನ್ನ ದೇವತೆಗೆ ಇಟ್ಟ ಪ್ರೀತಿಯ ಹೇಸರು) ನಮ್ಮಿಬ್ಬರ ಮಾತಿನ ಒಪ್ಪಂದದ ನಂತರ ನಾನಂತು ನಿನ್ನನ್ನ ನೆನಸಿಕೊಳ್ಳುವುದನ್ನ ಬಿಟ್ಟಿದ್ದಿನಿ ಕಣೇ ಆದರೋ ನಿನ್ನ ನೆನಪು ದುಮಿಕ್ಕುವ ಜಾಲಧಾರೆಯಂತೆ ಕಾಡುತ್ತಿರುತ್ತದೆ ನೆನ್ನೆ ನನ್ನ ಕನಸಲ್ಲಿ ಬಂದುಕಾಡಿದ ನಿನ್ನಯ ನೆನಪು ಅವಿಸ್ಮರಣಿಯ... ಈ ಪ್ರಪಂಚದ ಪರಿವೆ ಇಲ್ಲದೆ ರಾತ್ರಿ ತಿಂದುಂಡು ಮಲಗಿದ್ದೆ, ನಿನ್ನಯ ನೆನೆಪಿನ ಕನಸು ನನ್ನನ್ನು ಒಮ್ಮೆ ಬೆಚ್ಚಿಬಿಳಿಸುವಂತೆ ಮಾಡಿತ್ತು.
ನಿನ್ನೆಯ ಕನಸು ಬಂದ ಬಗೆ...
ಈಡೀ ಕಗ್ಗತ್ತೆಲೆಯನ್ನು ಸೂರ್ಯ
ಒಮ್ಮೆಲೆ ನುಂಗಿದ ಹಾಗೆ...
ಅಯಾಗಿ ಮಲಗಿದ್ದವನ ಕನಸಲ್ಲಿ
ಭೂಮಿ ಪ್ರಳಯವಾದ ಹಾಗೆ....
ಒಂದು ದೈತ್ಯ ಕಲ್ಲು ಬಂಡೆ
ತಂತಾನೆ ಬಂದು ಎದೆಗೆ ಅಪ್ಪಳಿಸಿದ ಹಾಗೆ...
ಇದ್ದಕ್ಕಿದ್ದಂತೆ ಈ ಭೂಮಿ
ಪಾತಳಕ್ಕೆ ಕುಸಿದು ಬಿದ್ದ ಹಾಗೆ....
ಮರುಭೂಮಿಯಲ್ಲಿ ಬಿಸುವ
ಬಿರುಗಾಳಿಯ ಹಾಗೆ....

           ನಿಜ ಅಲ್ವೆನೆ ಸುಷಿ... ಕಾಲ ಎಷ್ಟೊಂದು ಕ್ರೂರಿ ಅಲ್ವಾ..? ಪ್ರೀತ್ಸೊ ಹೃದಯಗಳನ್ನ ಹುಡುಕಿ... ಹುಡುಕಿ.. ಕೊಲ್ಲೊದೆ ಈ ಕಾಲದ ನಿಯಮ ಅಂತ ನನಗನಿಸುತ್ತೆ.. ಕಣೇ. ನಿನ್ನಯ ನೆನುಪುಗಳು ನನ್ನೆದೆಯಲ್ಲಿ ಇನ್ನು ಮಾಸಿಲ್ಲ ಕಣೇ ಹುಡುಗಿ ಹಿಮಾಲಯ ಬೆಟ್ಟದಿಂದ ಜಿನುಗುವ ಮಂಜಿನಹನಿಯ ಹಾಗೆ ಈ ಪ್ರಾಣ ಇರೊವರೆಗೊ ಜಿನುಗುತ್ತಲೇ ಇರುತ್ತದೆ . ನೀನು ಹೇಳಿದ ಒಂದು ಚಿಕ್ಕ ಪದ (ನನ್ನನ್ನು ಮರೆತು ಬಿಡು ಸತೀಶ) ನನ್ನೆಲ್ಲ ಕನಸುಗಳನ್ನ ಸುಡುವ ಕಾಳ್ಗಿಚ್ಚಿನಂತೆ ಹಬ್ಬುತ್ತದೆ ಎಂದು ನಾನು ಬಾವಿಸಿರಲಿಲ್ಲ ನಾ ನಿನ್ನ ಮರೆಯೋದ...?
ಅದು ಸಾದ್ಯವಿಲ್ಲದ ಮಾತು.
ಯಾಕೆ ಗೊತ್ತಾ....?
ಲೇ ದಡ್ಡಿ
ಭೊಮಿ ಆಕಾಶ ಎಲ್ಲದರೂ ಒಂದಾಗುತ್ತಾ...?
ಸೂರ್ಯ- ಚಂದ್ರ ಎಲ್ಲದರೂ ಸೇರುತ್ತಾರ...?
ಸಮುದ್ರ ಯಾವಗಲಾದ್ರು ಬರಿದಾಗುತ್ತಾ...?

               ನಾ ಹೇಳಿದ ಇವಿಷ್ಟರಲ್ಲಿ ಯಾವದಕ್ಕಾದರು ಹೌದು ಅಂತ ಉತ್ತರ ಕೊಡು ಸಾಕು ಆ ಕ್ಷಣದಲ್ಲೆ ನಾ ನಿನ್ನನ್ನ ಮರೆಯುವ ಪ್ರಯತ್ನ ಮಾಡುತ್ತೆನೆ ....! ಅಗೊಲ್ಲ ಅಲ್ವ....! ಹಾಗೆ ನಾನು ನಿನ್ನ ಮರೆಯೊಕೆ ಅಗೊಲ್ಲ ಕಣೇ ಹುಡುಗಿ ನೀ ನನ್ನ ಜೀವ ಕಣೇ.  ಬೇಕಾದರೇ ಪ್ರಾಣ ಬಿಡು ಅಂತ ಹೇಳು ಬಿಟ್ಟುಬಿಡುತ್ತೆನೆ ನನ್ನನ್ನ ಮರೆತುಬಿಡು ಅಂತ ಮಾತ್ರ ಹೇಳಬೇಡ ಕಣೇ ಸುಷಿ ...
ನಿನ್ನನ್ನ ನಾ ಮರೆಯಲು ಕಾರಣಗಳಿಲ್ಲ . ನಿನ್ನ ನೆನಪುಗಳು ನನ್ನಲ್ಲಿ ಸವೆಯುದೂ ಇಲ್ಲ .
ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...
ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?

ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ
ಕಲರವವನ್ನ
ಮರಯಲಾದೀತೆ ಇಂದು..?

                ಹೇ ಸುಷಿ ನನ್ನ  ನೆನಪಿನ ಚೀಲದಲ್ಲಿ ಹೇಳಲಾಗದ ಕವಿತೆಗಳ ಸರಮಾಲೆ. ಗೀಚಿಬರೆದರೂ ಮಗಿಯದ ಪ್ರೇಮದ ಸಂದೇಶಗಳನ್ನ  ಅವಿತಿಟ್ಟುಕೊಂಡಿದ್ದೆನೆ  ಹೇ ಹುಡುಗಿ "ನೀ ನನ್ನ ಪ್ರೀತಿಯ ದೇವತೆ" ಕಣೇ ಈ ಭಕ್ತನ ಕೂಗು ನಿನಗೆ ಕೇಳಿಸದಿದ್ದರೆ ನಾನು ಹುಟ್ಟಿದ್ದೆ ದಂಡ....  "ಕೂಗಿ.. ಕೂಗಿ ಕರೆದರೂ ನಾನು ಕೇಳಲಿಲ್ಲವೇ ಒಮ್ಮೆ ಬಂದು ಹೋಗೆ ನೀನು ಕರುಣೆ ಇಲ್ಲವೇ.."
ನೀನಿಲ್ಲದ ನಾನು.......
ನಾನಾಡುವ ಈ ಮಾತು ವ್ಯರ್ಥ.
ಉಸಿರಾಡುವ ಗಾಳಿ ವ್ಯರ್ಥ.
ನಾ ನೋಡುವ ಕಣ್ಣು ವ್ಯರ್ಥ.
ನಾ ಹುಟ್ಟಿದ ಈ ಜನ್ಮ ವ್ಯರ್ಥ.
         ಇನ್ನೊಮ್ಮೆ, ಮತ್ತೊಮ್ಮೆ , ಮಗದೊಮ್ಮೆ ಯೋಚನೆ ಮಾಡು ಸುಷಿ ನಾ ನಿನ್ನ  ಮೇಲಿಟ್ಟ ಪ್ರೀತಿ ಯಾವ ಮಜ್ನುಗೂ ಕಡಿಮೇನಿಲ್ಲ ಈ ಜನ್ಮ ಪೂರ್ತಿ ನಿನ್ನ ಪ್ರೀತಿನ ಕಾಯುವ ದಾಸ ನಾನು.  ನಿನ್ನ ಪ್ರೀತಿ ಪಡೆಯಲೇಂದೆ  ಆ ಬ್ರಹ್ಮನಲ್ಲಿ ವರ ಪಡೆದು ಹುಟ್ಟಿದ ಕೂಸೆ ನಾನು  .  ಪಡೆಯದೆ ಹೊದರೆ ನಿನ್ನ ಪ್ರೀತಿ ನನ್ನಂತ ಪಾಪಿ ಇನ್ನೊಬ್ಬನಿಲ್ಲ ನನಗೇಂದೆ ಇನ್ನೊಂದು ಜನ್ಮವಿದ್ದರೆ ಅದು ಕೂಡ ನಿನ್ನ ಪ್ರೀತಿಗೆ ಮುಡಿಪು.....

ನಿನ್ನ ಪ್ರೀತಿಯ ಕಾಯಕ
SATISH N GOWDA

ಅವಳ ಬಗ್ಗೆ ಇಣುಕು ನೋಟ 
ನೆಚ್ಚಿನ  ಗೆಳತಿಗೆ  ಮೊದಲ  ಪ್ರೀತಿಯ ಪತ್ರ .....
http://nannavalaloka.blogspot.com/2009/12/hi-sushma.html
"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "
http://nannavalaloka.blogspot.com/2010/02/blog-post_11.html 

Sunday, October 17, 2010

ಮೋಹಕ ಕಂಗಳ ಚಲುವೆಗೆ ...




ಮೋಹಕ ಕಂಗಳ ಚಲುವೆಗೆ ...



           ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ. ಆ ಮಳೆ ಬಂದ ರಬಸದಷ್ಟೇ ಕಾಡಾಲಾರಾ0ಬಿಸಿತ್ತು  ನಿನ್ನಯ ನೆನೆಪು ಹೇ ಹುಡುಗಿ ಈ ಮಳೆಗೂ ನಿನ್ನ ನನ್ನ ಪ್ರೀತಿಗೂ ಏನೋ ಒಂತರ ಅನುಬಂಧ ,ನಂಟು ನಮ್ಮಿಬ್ಬರ ಪ್ರೀತಿ ಚಿಗುರಿದ ದಿನವನ್ನು ನೆನೆದು ನೋಡು ...! ಅಂದು ನಾವಿದ್ದದ್ದು ನಿಮ್ಮೂರಿನ ಆ ಮಲೆನಾಡ ಗುಡ್ಡದ ಮೇಲೆ ನನ್ನ ಪ್ರೀತಿಯ ಕರೆಗೆ ಒಗುಟ್ಟು  ನಿನ್ನೆಲ್ಲ ಕೆಲಸಗಳನ್ನು ಬಿಟ್ಟು .ಅಂದು ಮಧುರ ಭಾಂದವ್ಯ ದೊಂದಿಗೆ ನನ್ನ ನಿನ್ನ ಪ್ರೀತಿಗೆ ಅಂಕಿತ ಹಾಡಿದ್ದೆ ನೆನಪಿದೆಯ ..? ಹುಡುಗಿ ಹಾಗೇ ನೀನು ನನಗೆ    I LOVE U 2  ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ನಮ್ಮಿಬ್ಬರ ಪ್ರೀತಿಗೆ ಹನಿಯ ಸಿಂಚನ ಮಾಡಿದ್ದ . ನನ್ನ ಪ್ರೀತಿಯ ಗುಬ್ಬಚಿ ಮರಿ ಒದ್ದೆಯಗದಿರಲೆಂದು ಎದೆಯತೋಳಲ್ಲಿ  ನಿನ್ನನ್ನು ಸೇರಿಸಿದ್ದೆ . ಮೊದಲಿನಿಂದಲೂ ಅಷ್ಟೇ ಮಳೆ ಬಂತೆಂದರೆ ಸಾಕು ನನ್ನೆಲ್ಲಾ ನೆನಪುಗಳ ಹಕ್ಕಿಗೆ ರೆಕ್ಕೆ ಬಿಚ್ಚಿ ಹಾರೋ ಸಮಯ ಶುರುವಾಯಿತೆಂದೇ   ಅರ್ಥ ಇದು ನೆನ್ನೆ ಮೊನ್ನೆಯದಲ್ಲ ಸರಿ ಸುಮಾರು ನನ್ನ ಬಾಲ್ಯದಿಂದಲೂ ಕೋಡ  ಅದು ನಿನಗೂ ಗೊತಿಲ್ಲದ ವಿಷಯವೇನಲ್ಲ ಬಿಡು .ಆದರೆ ಅಂತಹ ಎಷ್ಟೋ  ಮಳೆಯದಿನಗಳು ನಮ್ಮಿಬ್ಬರನ್ನ ಭಾವುಕರನ್ನಗಿಸಿವೆ ಅಲ್ಲವೇನೆ ಪಾಪು ...!
             ಕಳೆದ ವಾರ ನಾನು ನನ್ನ ಸ್ನೇಹಿತರ ಜೊತೆಗೊಡಿ  ನಿಮ್ಮೂರಿನ ಕೆಲ ಪ್ರವಾಸಿ ತಾಣಗಳನ್ನು ಸುತ್ತಾಡಿ ಕೊನೆಗೊಮ್ಮೆ  ಆಕಸ್ಮಿಕವಾಗಿ ನಾವು ಪ್ರತಿ ಬೇಟೆಯಲ್ಲೂ  ಕುಳಿತು ಕೊಳ್ಳೋ ಜಾಗದಲ್ಲಿ   ಹೋಗಿ ಕುಳಿತೆ . ಆಕಸ್ಮಿಕವೋ ಅಥವಾ ಅದೃಷ್ಟವೋ ಎಂಬಂತೆ ವರುಣರಾಯ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದ .ಆಗ ಕಾಡಿತ್ತು ಏಕಾಂಗಿತನ ಅವಾಗ ನಿನ್ನ ನೆನಪಿನೊಂದಿಗೆ ಹುಟ್ಟಿದ ಕವನವೇ ಇದು  ಹೇಗೂ ಮುಂದಿನ ರಜಾ ದಿನಗಳಲ್ಲಿ ನಾನು ನಿಮ್ಮ ಊರಿಗೆ ಬರ್ತಿದೀನಿ  ನಿನ್ನ ಹೆಜ್ಜೆಯ ಜೊತೆ ಹೆಜ್ಜೆ ಸೇರಿಸುವ ಆಸೆ, ಕೈ ಕೈ ಹಿಡಿದು ಒಂದಿಡೀ ದಿನ ನಿನ್ನ ಜೊತೆ ಸಾಗುತ್ತಾ ನಿಮ್ಮೂರಿನ ಬೆಟ್ಟ ಗುಡ್ಡಗಳನ್ನು ಪರಿಚಯಸು ನಮ್ಮಿಬ್ಬರಿಗೆ ಆಸರೆಯಾಗಿ ವರುಣರಾಯ ಜೊತೆಯಲ್ಲಿ ಇದ್ದೇ ಇರುತ್ತಾನೆ ಒಂದಿಷ್ಟು ಸಮಯ ಪ್ರೀತಿಯ  ಲೋಕದಲ್ಲಿ ರಾಜ ರಾಣಿ ಯಾಗಿ ಮೆರೆದಾಡುವ ಹಾಗೇ   ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರಲ್ಲಿ ನನ್ನ ಪ್ರತಿಬಿಂಬ ಕಾಣುವ ಆಸೆಯಾಗಿದೆ   ಹಾಗೇ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು  ಹೇ ಪಾಪು ರೆಡಿಯಾಗಿರು ....!


SATISH N GOWDA
9844773489

Saturday, October 9, 2010

ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
ಹೇ ಹುಡುಗಿ
ನೀ ತೊಟ್ಟರೆ ಲಂಗಾ-ದಾವಣಿ
ರಾಜಕುಮಾರಿಯೂ ಎದ್ದು ಬಂದಾಳಲ್ಲಾ
ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು.
ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು
ನಿನೇನು ಹುಡುಗಿಯೋ ಅಥವಾ
ಧರೆಗೀಳಿದು ಬಂದ ಇಂದ್ರಲೋಕದ
ಸ್ಪಪ್ನ ಸುಂದರಿಯೋ...?


ಹೇ ಹುಡುಗಿ
ನೀ ತೊಟ್ಟರೆ ಗಾಗ್ರ ಚೋಲಿಯ
ನಾಚಿ ನಿಂತಾನಲ್ಲಾ
ನಿನಗೆ ಜನ್ಮ ಕೊಟ್ಟ ಆ ಬ್ರಹ್ಮ,
ಧುಮಕ ಹೊಂಟಾನಲ್ಲಾ,
ಆ ಸಮುದ್ರಕ್ಕೆ ಈ ಸೂರ್ಯ
ನಿನೇನು ಹುಡುಗಿಯೋ ಅಥವಾ
ಸೌಂದರ್ಯದ ರಾಕ್ಷಸಿಯೋ..?


ಹೇ ಹುಡುಗಿ
ನೀ ತೊಟ್ಟರೆ ಸ್ಯಾರಿ, ರವಕೆಯ
ಓಡಿ ಬಂದಾರಲ್ಲಾ
ನಿನ್ನ ನೋಡಲು ರೆಂಬೆ,ಊರ್ವಶಿ,ಮೇನಕೆಯರು
ಸಾರ ಹೊರಟಾರಲ್ಲಾ
ದೇವಲೋಕದ ಇಂದ್ರನೆ ಮೇಲೆ ಯುದ್ದವ
ನಿನೇನು ಹುಡುಗಿಯೋ ಅಥವ ದೇವ ಕನ್ಯಯೋ...?


ನೀ ನಿಂತರೆ ಕಣ್ಣ ಮುಂದೆ
ಕಾಣದಾಯಿತು ಮುಂದಿನ ಪ್ರಪಂಚ
ಬಾರದಾಯಿತು ಮಾತುಗಳ ಸ್ವರಮಾಲೆ
ನಿನ್ನ ಹೊಗಳಲು ಚಂದದ ಪದಗಳಿಲ್ಲ
ನಾ ನೋಡಲು ಈ ಪ್ರಪಂಚದಲ್ಲಿ ಎನೋ ಉಳಿದಿಲ್ಲ
ನೆನ್ನೆ ಮೊನ್ನೆಯವರಿಗೊ ನೀ ಕಾಣಲಿಲ್ಲ
ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
SATISH N GOWDA

Saturday, October 2, 2010

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!


              (ಚಿತ್ರ ಕೃಪೆ ಗೂಗಲ್ )
         ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!

                       ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್  ಎಲ್ಲೋ  ಕೇಳಿದೀನಿ...! ಅನಿಸ್ತಿದೆ ಆಲ್ವಾ  Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ  ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... !  F M  ರೇಡಿಯೋ ಗಳಲ್ಲಿ    ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....!  ಲಡಕಿ.....  ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..!  ಹಾಗಂತ  ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ  ಅವರೂ ಕೋಡ  ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ  ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ  ಉಡುಗೆಯ  ಮೊಲಕ ಪ್ರಿಯಕರನಿಗೆ  ಪ್ರೇಮ  ಪತ್ರ ನೀಡುತ್ತಿದ್ದಳು  ಹೇಗೆಂದರೆ  ರೆಡ್  -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ  ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ  ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ  ಮಾಡಿ ಕೊಳ್ಳುತ್ತಿದ್ದರು ,                   ಈ ಹದಿಹರೆಯದ  ಮನಸ್ಸೇ ಹೀಗೇ  ಅರ್ದ ಬೆಂದ ಮಡಿಕೆಯ ಹಾಗೆ  "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ "   ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ  ಸಮಾನ ವಯಸ್ಸಿನ ಗೆಳೆಯರು  ಮನದಾಳದ  ಮಾತುಗಳು  , ಸ್ವಚಂದವಾದ ಕನಸುಗಳು  .ನೆಚ್ಚಿನ ಗೆಳತಿಯರ  ಹೊಸ ಹೊಸ ಟೇಸ್ಟ್ ಗಳು    . ಈ ಮೂಲಕ ಕಾಲೇಜುಗಳಲ್ಲಿ  ಹುಡುಗ ಹುಡುಗಿಯರನ್ನು ಚುಡಾಯಿಸುವುದು  ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು  ಹುಡುಗಿಯರಿಗೆ  ಹೊಡೆಯುವ   ಡೈಲಾಗ್ ಗಳು    ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು ,               ಈಗಿನ ಕಾಲೇಜುಗಳಲ್ಲಿ  ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್  ಮಾಡ್ತಿದ್ದಾರೆ  ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯಅಂತ ಹಾಡಕ್ಕೆ ಶುರುಮಾಡ್ತಾರೆ   ಅಕಸ್ಮಾತ್  ಹುಡುಗಿ  ಕಾಲೇಜುಗಳಲ್ಲಿ  ಬೇಗ ಬಂದರೆ " ಬಾರೆ ...! ಬಾರೆ ..! ಚಂದದ  ಚಲುವೆಯೇ  ಬಾರೆ...!  ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ  " ಸುಮಸುಮ್ನೆ ನಗ್ತಾಳೆ " ಅಂತಾರೆ     ಹೀಗೇ ಒಂದಿಲ್ಲದ  ಒಂದು  ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ  ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು  ಎಂದು  ಮೂಗು  ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ  ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ  ವೇಟಿಂಗ್   ರೋಮ್  ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ  ತಮಾಷೆಗೆ  ...! ತಮಾಷೆಗೆ ...!                        ಇದನ್ನೆಲ್ಲಾ ಮಾಡುತ್ತಾ  ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ  ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು  ನಮ್ಮೊರ ಹುಡುಗಿಯರು ತುಂಬಾ  ಚಾನ್ನಗಿ ತಿಳಿದುಕೊಂಡಿದ್ದಾರೆ   ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ   ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ   "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....!  ಹಾಟ್ಸ್ ಅಪ್ ಟು    ನಮ್ಮೊರ ಹುಡುಗಿಯರು "                   "ಹಾಗೇ ನನ್ನದೊಂದು ಚಿಕ್ಕ ಮನವಿ  ದಯವಿಟ್ಟು  ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್   ಮಾಡ್ಕೊಳ್ಳೋ  ಹುಡಗರನ್ನ  ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ    ಒಮ್ಮೆಲೇ ಡ್ರಾಪ್ ಮಾಡಬೇಡಿ  ಪ್ಲೀಸ್  ಯಾಕೆಂದರೆ   ನೀವೇನೋ ವಿಶಾಲ ಹೃದಯದವರು ಆದರೆ ಅವರು  ಪುಟ್ಟ ಹೃದಯದ  ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ  ಆದರೆ  ಹರೇಹುಡುಗರ ಮನಸ್ಸು ನೋಯಿಸಬೇಡಿ   ಅವರು ಪಡೋ ನೋವು ತುಂಬಾ ದೊಡ್ಡದು "  ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....!  ಒಮ್ಮೆ ಯೋಚಿಸಿ ನೋಡಿ  ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....! 

SATISH N GOWDA 

Tuesday, September 28, 2010

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ



ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

          ಹೇ.....! ಅಮೋಘ ಈ ನಡುವೆ ಬರ್ತಾ ಬರ್ತಾ ನಿಂದು ಜಾಸ್ತಿ ಆಯಿತು   ಕಣೇ ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip  ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್  ಕೋಪಾನಾ U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....! 
           ನನಗೂ  ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ  ಹುಡುಗಿನಾ ನಾನು ನಿನ್ನೆ ನೋಡ್ತಿರೋದು  ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ  ಬರೋದು ತುಂಬಾ ಕಷ್ಟ ,
                            ಓ ......! ಗೊತಯಿತು ಕಣೇ 
ಅಮೋಘ ,ನಾನು Mysore ನವಳು ಅಂತಾನ ಆಗಿನ ಕಾಲದ   ಕವಿಗಳಿಂದ ಹಿಡಿದು ಈಗಿನ  ಕಾಲದ ಸಿನಿಮ ಸ್ಟಾರ್ ಗಳ ವರಗೂ  Mysore   ಹುಡುಗಿರನ್ನ   ತುಂಬಾ ಹೊಗಳ್ತಾರೆ So  Bengalore  ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......!  ಹೋಗೆಲೇ ದಡ್ಡಿ ನೀನು . "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು  ತಾನೆ..?  ಅವನು ಯಾವೋನೋ "ದೇವದಾಸ್ " ಅಂತೆ  ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ  ಕೊಡ್ಕೊಂಡ್   ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ 

                              ಆದರೋ ನೀನು ಒಳ್ಳೆಯವಳು ಕಣೇ
ಅಮೋಘ ಹೇ ಹುಡುಗಿ  ಇಷ್ಟೊತ್ತು  ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry  ಕಣೇ ಅಮೋಘ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ  ನಿನಗೆ ಹೃದಯ  ಕೊಟ್ಟಿರೋದು ಅದನ್ನ ಇಟ್ಕೊಂಡು   ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ  ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose  ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆಪಾಪ,Exams Busy  ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
                    ಹೇ   
ಅಮೋಘ  ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .  ನಿನಗೊತ್ತಾ ನಾನು "ಆಕಾಶ್ " Move  ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ"  ಹಾಡಿಗೋಸ್ಕರ ನೀನು ನನ್ನ Life  ನಲ್ಲಿ ಅಷ್ಟೊಂದು ಬೇರೆತೋ  ಹೋಗಿದಿಯ   ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ  ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ   ಕಣೇ ಅಮೋಘ. 
                    ನನಿಗನಿಸುತ್ತೆ  ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move   ನಲ್ಲಿ Climax  ಗೇ ಗಣೇಶ್  ಅಕೊತನಲ್ಲ ಆ ಗೆಟಪ್ ನ  Tilar ಗೇ ನಾನೆ Ader ಕೊಟ್ಟೋ Stich  ಮಾಡಿಸ  ಬೇಕಾಗುತ್ತೆ   ಕಣೇ 
                  Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ
ಅಮೋಘ  ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು  ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ   ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ  ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
                            ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ   ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ಎದೆಯಲ್ಲಿರಿವ ಮಳೆಯಂತ ಪ್ರಿತಿಯನ್ನ ನನ್ನ ಮೇಲೇ ಸುರಿಸ್ತಿಯ ಅಂತ  ಕಾಯಿತ  ಇದೀನಿ ಕಣೇ
ಅಮೋಘ......!

ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
SATISH N GOWDA 
9844773489 

Monday, September 27, 2010

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

 ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ
ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

ನನ್ನ ನಿನ್ನ ಮಿಲನ 
ಹೇಳಲಾಗದ ಪದಗಳ ನಯನ 
ಗೀಚಿ ಬರೆದರೂ ಕೂಡ 
ಮುಗಿಯಲಾರದ ಪ್ರೇಮ ಕವನ .

ದೇವರ ಮಹಿಮೆ ನಾ ಕಾಣೆ ಗೆಳತಿ 
ನಿನ್ನ ಕಣ್ಣ ನೋಟಕ್ಕೆ ನಾನದೆ 
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

ನಿನ್ನ ಒಂದು ಸ್ಪರ್ಶಕ್ಕೆ 
ಕ್ಷಣರ್ದದಲ್ಲಿ   ಮೂಡಿದ ಸಂಚಲನ 
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.

ಏನಿದೆಯೋ ದೇವರೇ .....!
ಹೆಣ್ಣಿನ ಮನಸ್ಸಿನಲ್ಲಿ ನಾನಂತು ಅರಿಯೆ 
ತೊಳೆದು ಒರಸಿದರೋ ಕಾಣದ 
ಸುವರ್ಣಾಕ್ಷರಗಳ  ಸರಮಾಲೆ .

ಕೊಡಿಸಿ , ಗುಣಿಸಿ , ಭಾಗಿಸಿದರೋ 
ಬಾರದ ಉತ್ತರ ಹೆಣ್ಣು , ಮತ್ತು 
ಅವಳ ಮನಸ್ಸಿನ ಚಿತ್ರಗಳ ಭಾವನೆ 
ಹೆಣ್ಣನ್ನು ಸೃಷ್ಟಿಸಿದ   ದೇವರೇ 
ನಿನಗಿದೋ ನನ್ನದೊಂದು ಸಲಾಂ ....

.
ಅಪರೋಪಕ್ಕೊಮ್ಮೆ ಸಿಕ್ಕ ಹುಡುಗಿ ...
SATISH N GOWDA

Thursday, September 16, 2010

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

(ಚಿತ್ರ ಕೃಪೆ ಗೂಗಲ್ )


ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ 
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ 
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು 
ಸುತ್ತಾಡಿದೆ ನಿನ್ನ ಮನೆಯನ್ನು 
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ 
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ 
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಎಲ್ಲಿಂದ ಬಂದ ಜೀವನವೋ ತಿಳಿಯದು 
ಎಲ್ಲಿಗೀ ಪಯಣವೋ ತಿಳಿಯದು 
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಅಂದು...! ಇಂದು ..!ಎಂದೂ...!
ನನ್ನದೊಂದೇ ಶಪಥ 
ಪ್ರೀತಿ ನಿನ್ನಯ ಮಡಿಲಿಗೆ 
ದೇಹ ಪ್ರಕೃತಿಯ ಸೊಬಗಿಗೆ ....!

ಇಂತಿ ನೊಂದ ಜೀವ 
SATISH N GOWDA  

Saturday, September 4, 2010

ಯೋಚಿಸ ಬೇಡ ,ಪ್ರೀತಿಸಿ ನೋಡು ....

(ಚಿತ್ರ ಕೃಪೆ ಅಂತರ್ಜಾಲ )

ಪ್ರೀತಿಸಿ ನೋಡು ....

ಕನ್ನಡಿಯ
ಮುಂದೆ
ನಿಂತು
ನೀ ನಿನ್ನ 
ಪ್ರೀತಿಯ 
ಬಿಂಬ  
ಕಾಣುವಂತೆ
ಪ್ರಿತಿಯಲ್ಲಿಯೋ  
ನಿನ್ನ 
ಪ್ರೀತಿಯಬಿಂಬ 
ಕಾಣುತ್ತಿಯ
ಯೋಚಿಸ  ಬೇಡ
ಒಮ್ಮೆ 
ಪ್ರೀತಿಸಿ ನೋಡು ...

ಪ್ರೀತಿಸಿ ನೋಡು ....
SATISH N GOWDA

ಸೌಂದರ್ಯವತಿ ...


(ಚಿತ್ರ ಕೃಪೆ ಅಂತರ್ಜಾಲ)
ಸೌಂದರ್ಯವತಿ ...
ಇವಳ್ಯಾರ ಮಗಳೋ ನಾ ಕಾಣೆ
ಒಂದು ವಾರೆ ನೋಟದಿಂದ
ತನ್ನ ಗುಲಾಮನನ್ನಾಗಿ ಮಾಡಿಕೊಂಡ 
ಮೊದಲ ಹುಡುಗಿ 

ಆ ತುಂಟ ತನದ ಹುಡುಗಿ
ಬರೀ ಕಣ್ಣ ಸನ್ನೆಯಲ್ಲೇ 
ನನ್ನ ಹೃದಯ ಸ್ಪರ್ಶಿಸಿದ
ಮೊದಲ ಬೆಡಗಿ 

ಒಂದು ಮಿಂಚಿ ಮರೆಯಾಗುವ 
ಮುಗುಳ್ನಗೆಯಿಂದ ನೀನೇ
ನನ್ನ ಬಾಳ ಸಂಗಾತಿ
ಎಂದ ಸೌಂದರ್ಯವತಿ ...

ಸೌಂದರ್ಯವತಿ ...
SATISH N GOWDA

Friday, August 27, 2010

ವಾರೇ..... ವಾಹ್.

( ಚಿತ್ರ ಕೃಪೆ ಅಂತರ್ಜಾಲ)

ವಾರೇ..... ವಾಹ್.......

ನಮ್ಮೂರಿನ ಕೆಸರು ಗದ್ದೆಯಲ್ಲಿ
ಸೊಗಸಾಗಿ ಬೆಳದ ಹುಲ್ಲಿನ ಮದ್ಯ
ಸುಂದರವಾಗಿ ಕಂಡ
ಹುಡುಗಿಯೊಬ್ಬಳ ಜೊತೆಯಲ್ಲಿ
ಅಣ್ಣಾವ್ರ ಹಾಡು ಹಾಡಿಕೊಂಡು
ಹಾಗೆ ಸುಮ್ಮನೆ
ಒಂದು ಲುಕ್ ಕೊಟ್ಟರೆ
ಎನ್ ಮಜಾ ಅಂತೀರಾ...!
ವಾರೇ..... ವಾಹ್.....

ಬೆಂಗಳೊರಿನ M G ರಸ್ತೆಯಲ್ಲಿ
ಧೋ ಎಂದು ಸುರಿಯುತ್ತಿರುವ ಮಳೆಯ ಮದ್ಯ
ಇಷ್ಟವಾದ ಹುಡುಗಿಯನ್ನು
ಹೃದಯಕ್ಕೆ ಅಪ್ಪಿಕೊಂಡು
ರಸ್ತೆಯಲ್ಲಿ, ಸುರಿಯುತ್ತಿರುವ ಮಳೆಯಲ್ಲಿ
ಹಾಗೆ ಒಂದು ರೌಂಡ್ ಬಂದರೆ
 
ವಾರೇ..... ವಾಹ್.....
ಎನ್ ಮಜಾ ಅಂತೀರಾ...!

ರಾತ್ರಿಯ ನವಿರಾದ ನಿದ್ರೆಯಲ್ಲಿ
ಸುಂದರವಾದ ಕನಸಿನ ಒಳಗೆ
ಪ್ರೀತಿಸಿದ ಹುಡುಗಿಯನ್ನ
ಕಲ್ಪನೆ ಮಾಡಿಕೊಂಡು
ಬೆಳಗ್ಗೆ ಕಣ್ಣು ಬಿಡೊ ಸಮಯದಲ್ಲಿ
ಅಮ್ಮನ ಬದಲು
ಪ್ರೀತಿಸಿದ ಹುಡುಗಿ
ಕಾಫ್ಫಿ  ಮಾಡಿಕೊಂಡು ಬಂದರೆ....
ಎನ್ ಮಜಾ ಅಂತೀರಾ...!
 
ವಾರೇ..... ವಾಹ್....

ವಾರೇ..... ವಾಹ್.
SATISH N GOWDA

Sunday, August 22, 2010

ಎನೋ ಒಂಥರಾ..!

                                               (ಚಿತ್ರ ಕೃಪೆ ಅಂತರಜಾಲ )
ಎನೋ ಒಂಥರಾ..!

ಮರೆಯಲಾಗದ ನಿನ್ನಯ
ಪ್ರೇಮಗೀತೆಯಲ್ಲಿ
ಅಳಿಸಲಾಗದ ಸಾಲುಗಳನ್ನು
ನೆನೆಸಿಕೊಂಡರೆ
ಮನಸ್ಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ..!

ಹಳೆಯ ನಿನ್ನಯ ಹಾಡು,
ಜಿನುಗುವ ತುಂತುರು ಮಳೆಯಲ್ಲಿ
ನೆನೆ, ನೆನೆಯುತ್ತಾ...
ಮೂಗಿನ ತುದಿಯಲ್ಲಿ ಗುನುಗಿದರೆ
ಈ ಪುಟ್ಟ ಹೃದಯದಲ್ಲಿ
ಹೇಳಲಾಗದ
ಎನೋ ಒಂಥರಾ ಉಲ್ಲಾಸ ಸಂತೋಷ..!

ಮುಂಜಾನೆಯ ಬೆಳದಿಂಗಳಲ್ಲಿ
ಬೆಚ್ಚನೆಯ ಕನಸು ಬೀಳೊದೆ ಒಂಥಾರ ಉಲ್ಲಾಸ.
ಆ ಕನಸು ನೀನಾದರೆ....?
ನೀನೇ ನಾನದರೆ....?
ಮನಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ...!

ಪ್ರೀತಿಯ ಮಳೆಯಲ್ಲಿ ನಾನು,
ನನ್ನ ಈ ಪುಟ್ಟ ಹೃದಯದಲ್ಲಿ ನೀನು,
ಒಮ್ಮೆ ಹಾಗೆ ಕಣ್ಣಮುಂದೆ ನೆಡೆದಾಡುತ್ತಿದ್ದರೆ,
ಅಥಾವ ಹೃದಯದ  ಹತ್ತಿರದಲ್ಲಿ
ನಿನ್ನನ್ನು ತಬ್ಬಿಕೊಂಡರೆ, ಎನೋ
ಒಂಥರಾ ಉಲ್ಲಾಸ ಸಂತೊಷ....!

ಎನೋ ಒಂಥರಾ..!
SATISH N GOWDA

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ 
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html

Wednesday, August 18, 2010

ಇದು ನನ್ನ ಬಾಲ್ಯದ ನೆನಪು...!

            
  ಹಾರುವ ಹಕ್ಕಿಯಾಗಿ

      ಪ್ರತಿಬಾರಿ ಸ್ವತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯ ಊಮ್ಮಳಿಸಿಬರುತ್ತದೆ . ಗರಿ-ಗರಿ ಚಡ್ಡಿ ಬಿಳಿ ಅಂಗಿ ತೊಟ್ಟು ನಾನು ಮತ್ತು ನನ್ನ ಗೆಳೆಯರು ಶಾಲೆಗೆ ಓಡುತ್ತಿದ್ದೆವು . ನಮ್ಮೂರಿನಿಂದ ಶಾಲೆ ಸ್ವಲ್ಪ ದೂರವಿತ್ತು . ಹೀಗಾಗಿ ಬೆಳಗ್ಗೆ ನಸುಕಿನ ವೇಳೆಯಲ್ಲೆ ನಮ್ಮ ಪಯಣ ಆರಂಭವಾಗುತ್ತಿತ್ತು. ಜೊತೆಗೆ ಅಕ್ಕ ಕೊಡಿಟ್ಟುಕೊಟ್ಟ ಸುಮಾರು ಏಳೆಂಟು ಬಣ್ಣದ ಹೂವುಗಳು. ಜೋತೆಗೆ ನನ್ನ ಹೈದಾರು ಜನ ಗೆಳೆಯ ಗೆಳತಿಯರು . ಚುಮು ಚುಮು ಚಳಿಯಲ್ಲಿ ಮಂಜುಕರಗಿ , ಇಷ್ಟಿಷ್ಟೆ ಬೆಳಕು ಮೂಡುವ ಹೊತ್ತಿಗೆ ನಾವು ಶಾಲೆ ಸೇರುತ್ತೆದ್ದೆವು. ಮೋಡದಿಂದ ಕೆಳಗಿಳಿದು ಬಂದ ದೇವರ ಮಕ್ಕಳ ಹಾಗೆ .... ತಂದ ಹೂಗಳನ್ನು ಶಾಲೆಯಲ್ಲಿ ಬಿಡಿಸಿದ ಭೂಪಟದಲ್ಲಿ ಅಲಂಕರಿಸುವ ಮೂಲಕ ನಮ್ಮ ಕೆಲಸ ಶುರುಗೊಳ್ಳುತ್ತಿತ್ತು.
                ಸ್ವಾತಂತ್ರದಿನಾಚರಣೆಯ ದಿನದಂದು ಶಾಲೆಗೆ ಮೂದಲು ಬರಿತ್ತಿದ್ದವರು ನಾವೆ. ಆನಂತರ ಸುವರ್ಣ ಟೀಚರ್ ಬರುತ್ತಿದ್ದರು ನಾವೆಲ್ಲ ಹೊಗಿ ಅವರು ಬಸ್ ಬರುವುದನ್ನೆ ಕಾಯ್ದು ಶಾಲೆಯ ಕೀಯನ್ನು ಮೊದಲು ಹಕ್ಕಿ ತರುತ್ತೆದ್ದೆವು . ತದ ನಂತರ ಶಾಲೆಯ ಹಕ್ಕಿಗಳಂತೆ ಇತರೆ ಸ್ನೇಹಿತರು,ಸ್ನೇಹಿತೆಯರು ಬರುತ್ತಿದ್ದರು . ನಾವೆಲ್ಲರು ಬಿಳಿಯ ಶರ್ಟ್ ಮತ್ತು ನೀಲಿಯ ಚಡ್ಡಿ ತೊಟ್ಟು ಎಲ್ಲರೂ ಕೊಕ್ಕರೆಗಳಂತೆ ಕಾಣುತ್ತೆದ್ದೆವು . ಎಲ್ಲವೂ ಶುಭ್ರ, ಹಾಗತಾನೆ ಹುಟ್ಟುವ ಸೂರ್ಯಕೊಡ  ನಮ್ಮನ್ನು ಕಂಡು , ನಮ್ಮ ಶುಭ್ರತೆಯನ್ನು ಕಂಡು ನಾಚಿ ಒಮ್ಮೆ ಕಣ್ಣು ಮಿಟುಕಿಸುತ್ತಿದ್ದ. ನಮ್ಮೂರಿನ ಹಿರಿಯರು ದ್ವಜವನ್ನು ಕಟ್ಟಿ ಅದೋರೊಳಗೆ ನಾವು ತಂದಿರುತ್ತಿದ್ದ ಬಿಡಿ ಹೂವುಗಳನ್ನು ಹಾಕಲು ಹೇಳುತ್ತಿದ್ದರು. ನಾವೆಲ್ಲ ಇಬ್ಬನಿಯ ಮುತ್ತುಗಳ ಇನ್ನೂ ಹಾರದ ಕೆಂಪು ಗುಲಾಬಿಯ ರೆಕ್ಕೆಗಳನ್ನು ಬಿಡಿಸಿ ರಾಷ್ಟ್ರದ್ವಜದೊಳಗೆ ಹಾಕುತ್ತಿದ್ದೆವು. ಅಂದಿನ ದಿನ ನಮ್ಮಲ್ಲಿ ಏನೋ ಪುಳಕ , ಉಕ್ಕಿಬರುವ ಉಲ್ಲಾಸ, ಶಾಲೆಯ ಮುಂದೆ ದೊಡ್ಡದಾದ ಭೂಪಟವನ್ನು ಬಿಡಿಸಿ ಅದರೋಳಗೆ ನಮ್ಮನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ದರು . ನಾವೆಲ್ಲ ಅಭಿಮಾನದಿಂದ ಕತ್ತೆತ್ತಿಕೊಂಡು ಪಟಪಟಿಸುವ ರಾಷ್ಟ್ರದ್ವಜವನ್ನು ನೋಡುತ್ತಿದ್ದೆವು.

        ನಮ್ಮೊರಿನ ಹಿರಿಯ ಜೀವ ರಾಮಜ್ಜ ದ್ವಜಾರೋಹಣ ಮಾಡುತ್ತಿದ್ದರು . ಮಕ್ಕಳೆ ಸತ್ಯ ನುಡಿಯಿರಿ, ಒಳ್ಳೆಯದನ್ನೆ ಪ್ರೀತಿಸಲು ಕಲಿಯಿರಿ, ಸ್ವಾತಂತ್ರ್ಯ ನಮಗೆ ತುಂಭಾಕಷ್ಟದಿಂದ ಬಂದದ್ದು. ದೇಶದ ಎಷ್ಟೊ ಮಹಾನುಬಾವರು ಇ ಮುತ್ತಿಗಾಗಿ ತನ್ನ ಪ್ರಾಣವನ್ನೆ ಇತ್ತಿದ್ದಾರೆ ಎಂಬ ಮುತ್ತಿನಂತ ಮಾತುಗಳನ್ನಾಡುತ್ತಿದ್ದರು. ನಾವು ಮೇಲುದ್ವನಿಯಲ್ಲಿ "ಜನಗಣ ಮನ" ಮತ್ತು "ಒಂದೇ ಮಾತರಂ" ಹಾಡಿ . ನಿಂಬೆಹುಳಿ ಚಾಕಲೇಟ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಮಾತ್ರ ಸ್ವಲ್ಪ ಗಲಾಟೆಯಾಗುತ್ತಿತ್ತು.
     ನಂತರ ಭಾಷಣದ್ದು ನಾನು ಮಾತ್ರ ಸ್ವಾತಂತ್ರದಿನಾಚರಣೆಗೆ ಒಂದು ತಿಂಗಳು ಇರುವಾಗಲೆ ಭಾಷಣ ಬರಿಸಿಕೊಂಡು ಕಂಠಪಾಠಮಾಡುತ್ತಿದ್ದೆ . ಎಂಥಾ ಸಂಬ್ರಮ ಎನ್ನುತ್ತಿರಾ...? ನಿಶ್ಕಲ್ಮಶ ಮನಸ್ಸಿನಿಂದ ಮಾಡಿದ ಭಾಷಣಕ್ಕೆ ಚಿತ್ರಪಟದಲ್ಲಿರುವ ಗಾಂಧಿ ತಾತನೇ ಎದ್ದು ಬಂದು ಕೆನ್ನೆಗೆ ಮುತ್ತು ಕೊಡುತ್ತಿದ್ದನೋ ಎನೋ....! ಆಷ್ಟು ಮಾದುರ್ಯವಾಗಿರುತ್ತಿತ್ತು . ಇದು ನನ್ನ ಬಾಲ್ಯದ ನೆನಪು...!
      ಈಗ ಮತ್ತೆ ಅದೇ ಸ್ವಾತಂತ್ರ್ಯದಿನ ಬಂದಿದೆ . ನನಗೀಗ ೨೫ರವಯಸ್ಸು ಮೊದಲಿನಂತೆ ಖುಷಿ ಇಲ್ಲ, ಉತ್ಸಹವಿಲ್ಲ, ಯಾರೊ ಕಳುಹಿಸಿದ ಒಂದು ಮೆಸೇಜ್ ಗೆ ಸೇಮ್ ಟು ಯು ಎಂದು ರಿಪ್ಲೇ ಕುಟ್ಟಿ ಮುಖ ಕೆಳಗೆ ಹಾಕಿಕೊಂಡು ಕುಳಿತಿದ್ದೆನೆ . ನನ್ನ ಮನೆ ಎದುರಿಗೆ ಮಲ್ಲಿಗೆ ಮೊಗ್ಗಿನಂತ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೊಗುತ್ತಿದ್ದಾರೆ. ಆ ಮೊಗ್ಗಿನ ಮನಸ್ಸಿನಂತ ಮಕ್ಕಳೊಂದಿಗೆ ದ್ವಜಾರೊಹಣ ನೋಡಲು ಹೋಗುವ ಆಸೆ. ಅವರ ನಡುವೆ ನಿಂತು ಅವರದೇ ಆದ ಮೇಲು ದ್ವನಿಯಲ್ಲಿ ಜನಗಣ ಮನ ಹಾಡುವ ಆಸೆ, ಮಕ್ಕಳೆ ಒಳ್ಳೆಯದನ್ನೆ ಕಲಿಯಿರಿ ಎಂದು ಹೇಳುವ ಆಸೆ, ಮನೆಮುಂದೆ ಇರುವ ಸುಂದರ ಹೂವುಗಳನ್ನು ಕಿತ್ತುಕೊಂಡು ಹೋಗಿ ದ್ವಜದಲ್ಲಿ ಹಾರಿಸುವ ಆಸೆ, ಆದರೆ ಕಳ್ಳ ಮನಸ್ಸು ಸಿಕ್ಕಾ-ಪಟ್ಟೆ ಸೊಂಬೆರಿಯಾಗಿಬಿಟ್ಟಿದೆ.
     ಆದರೆ ಈ ಬಾರಿ ಹೋಗೆ.. ಹೊಗುತ್ತೆನೆ ಎದರುಮನೆಯ ಪುಟಾಣಿಗೊಂದು ಚುಟುಕಾದ ಬಾಷಣ ಬರೆದುಕೊಟ್ಟಿದ್ದೆನೆ . ನಾನು ಚಿಕ್ಕವನಾಗಿದ್ದಾಗ ನನ್ನ ಸುವರ್ಣಾ ಟೀಚರ್ ಬರೆದುಕೊಟ್ಟಿದ್ದರಲ್ಲ ಅದೇ ಭಾಷಣವನ್ನ ಒಂದೇ ಒಂದು ಪ್ಯಾರ. ಆ ಚೂಟಿ ಮಾಡುವ ನನ್ನದೇ ಭಾಷಣ ಕೇಳಲು, ನನ್ನದೇ ಬಾಲ್ಯಕ್ಕೆ ಮರಳ ಹೊರಟಿದ್ದೆನೆ .ಹೌದು ಈ ಬಾರಿ ಖಂಡಿತಾ ದ್ವಜಾರೋಹಣಕ್ಕೆ ಹೋಗಿಬರುತ್ತೆನೆ ಎಳೆಯ ಮಗುವಾಗಿ ...... ಹಾರುವ ಹಕ್ಕಿಯಾಗಿ....

SATISH N GOWDA

Tuesday, August 17, 2010

ಹೇ ಗಾಗ್ರ ಚಲುವೆ


ಹೇ ಗಾಗ್ರ ಚಲುವೆ..

ಹಾಲಿನಂತೆ ಉಕ್ಕಿ ಹರಿಯುವ
ಚಂದ್ರನ ಬೆಳದಿಂಗಳಲ್ಲಿ
ಕಂಡ ಸುಂದರ ಹುಡುಗಿಯ
ಚಂದದ ವರ್ತೆನೆಗೆ ಹುಟ್ಟಿದ
ನನ್ನೀ ಕವಿತೆ ....


ಹೇ ಗಾಗ್ರ ಚಲುವೆ
ನೀ ನೆಡೆಯೋ ರೀತಿಗೆ
ನಿನ್ನ ಬಳಕೋ ಸೊಂಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನೀ ನಾಡೊ ಮಾತಿಗೆ
ನಿನ್ನ ಕಣ್ಣನೋಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಬಿಸಿ ಅಪ್ಪುಗೆಗೆ
ನೀ ಕೊಡುವ ಸಿಹಿಮುತ್ತಿಗಾಗಿ
ಆತೊರೆಯುತಿಹದು
ನನ್ನೀ ಮನಸ್ಸು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಸಿಹಿ ನೆನೆಪಿಗೆ
ಒಂದಿಷ್ಟು ಕಹಿ ಮುನಿಸಿಗೆ
ಮನಸೊತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?
 ಹೇ ಗಾಗ್ರ ಚಲುವೆ
SATISH N GOWDA

Wednesday, August 11, 2010

ಬಾ ನನ್ನ ಜೋತೆಯಲ್ಲಿ...



ಬಾ ನನ್ನ ಜೋತೆಯಲ್ಲಿ...

ರಾತ್ರಿಯಾಗುತ್ತಿದ್ದಂತೆ
ಕಂಗೊಳಿಸುವ  ಚಂದ್ರ
ಬೆಳಗಿನ ಸೂರ್ಯನ ಮುಂದೆ ನಿಲ್ಲಲಾರ
ಆದರೂ ಅವನಿಗೂಂದು ಅಹಂಕಾರ ವಿದೆ
ನಾನೇ ಸೌಂದರ್ಯವಂತನೆಂದು
ನಿನ್ನನ್ನು ತೋರಿಸಿ ಅವನ
ಸೊಕ್ಕು  ಅಡಗಿಸಬೇಕಿದೆ
ಬಾ ನನ್ನ ಜೋತೆಯಲ್ಲಿ....

ಬೆಳಗ್ಗೆ ಹರಳುವ
ಕೆಂಪು ಗುಲಾಬಿ
ಸಂಜೆಯಾಗುತ್ತಿದ್ದಂತೆ
ಬಾಡಿ ನೆಲಕ್ಕುರುಳುತ್ತದೆ
ಆದರೂ ಅವಳು ನಾನೇ
ಅಂದಗತ್ತಿ ಎಂದು ಬೀಗುತ್ತಿದ್ದಾಳೆ
ನಿನ್ನನ್ನು ತೋರಿಸಿ ಅವಳ
  ಅಹಂಕಾರ ಮುರಿಯಬೇಕಿದೆ
ಬಾ ನನ್ನ ಜೊತೆಯಲ್ಲಿ....

ಸೂರ್ಯನ ಬಿಸಿಲನ್ನೂ
ತಾಳಿಕೊಳ್ಳದೆ ಕರಗಿಹೋಗುವ
ಮೋಡಗಳು ದುರಹಂಕಾರ ದಿಂದ
ನಗುತ್ತಿವೆ ನಾವೇ ನಮಗಿಂತ
ಸೌಂದರ್ಯವಂತರಿಲ್ಲ ಎಂದು
ನಿನ್ನನ್ನ ತೋರಿಸಿ ಅವುಗಳ
ಅಹಂಕಾರ ಅಡಗಿಸ ಬೇಕಿದೆ
ಬಾ ನನ್ನ ಜೊತೆಯಲ್ಲಿ...


ಬಾ ನನ್ನ ಜೋತೆಯಲ್ಲಿ... 
SATISH N GOWDA

ಓ ಪ್ರಕೃತಿ ದೇವತೆಯೇ....




ಓ ಪ್ರಕೃತಿ ದೇವತೆಯೇ....

ಓ ಪ್ರಕೃತಿ
ದೇವತೆಯೇ
ನೀ ಉಡುವ ಸೀರೆಯ
ಹೆಸರನ್ನಾದರೂ ಹೇಳಿಬಿಡು
ಸಾವಿರ
ಕನಸುಗಳ
ರಾಶಿಯಿಟ್ಟದರೂ
ನನ್ನ ಹುಡುಗಿಗೆ
ಉಡುಗರೆಯಾಗಿ
ತಂದುಕೊಡುವೆ.

ಓ ಗಾನಗಂದರ್ವ
ಕೋಗಿಲೆಯೇ
ನಿನ್ನ ಮಧುರ
ಕಂಠದ ದ್ವನಿಯನ್ನು
ತಿದ್ದಿ ತೀಡಿದ
ಮಹಾನುಭಾವನಾರೆಂದು ಹೇಳಿಬಿಡು
ಸಾವಿರ ಜನ್ಮಗಳ
ತಪಸ್ಸು ಮಾಡಿಯಾದರೂ
ನನ್ನ ಹುಡುಗಿಗೆ
ವರವಾಗಿ ಸಾದಿಸಿ ಕೂಡುವೆ.
ಓ ಪ್ರಕೃತಿ ದೇವತೆಯೇ.... 
SATISH N GOWDA

Tuesday, August 10, 2010

ವಿರಹಾ.... ನೂರು, ನೂರು ತರಹಾ...




ವಿರಹಾ.... ನೂರು, ನೂರು ತರಹಾ...
ವಿರಹಾ.... ಪ್ರೇಮಲೋಕದ ಕಹಿ ಬರಹ


ಮರಳುಗಾಡಿನ
ಮದ್ಯದಲ್ಲಿ
ಬಿರುಬಿಸಿಲಿನಲ್ಲಿ
ಉರಿಯುವ
ಸೂರ್ಯನಮುಂದೆ
ದಿನವಿಡೀ ನಿಂತಿರಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಕ್ಷಣವನ್ನು ಸಹಿಸಲಾಗುತ್ತಿಲ್ಲ.

ನಮ್ಮೂರಿನ
ಕೆಂಡಮಲ್ಲಿಗೆ
ಜಾತ್ರೆಯಲ್ಲಿ
ಹೊತ್ತಿ ಉರಿಯುತ್ತಿರುವ
ಬೆಂಕಿಯಲ್ಲಿ ಹಾಗೆ ಸುಮ್ಮನೆ
ನೆಡೆದಾಡಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಜನರ ಮಧ್ಯ
ನೆಡೆದಾಡುವುದು ಬಲು ಕಷ್ಟ.

ನಂದಿಬೆಟ್ಟದ
ಬಲು ಎತ್ತರವಾದ
ಶಿಕರದಿಂದ
ಕಲ್ಲು ಬಂಡೆಗಳ
ಮೇಲಿನಿಂದ ಪಾತಳಕ್ಕೆ
ಹಾಗೆ ಒಮ್ಮೆಲೇ ನೆಗೆಯಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಪ್ರಪಂಚದಲ್ಲಿ
ಕುಳಿತಿರುವುದು ನನ್ನಿಂದ ಸಾದ್ಯವಿಲ್ಲ
ವಿರಹಾ.... ನೂರು, ನೂರು ತರಹಾ...
SATISH N GOWDA

Saturday, August 7, 2010

ಕಾಣದ ಗೆಳತಿಗೂಂದು ಪ್ರೇಮಕಾವ್ಯ ....



ಕಾಣದ ಗೆಳತಿಗೂಂದು ಪ್ರೇಮಕಾವ್ಯ ....

ಹೇ ಹುಡುಗಿ ...
ನಿನ್ಯಾವ ದೇಶದ
ರಾಜಕುಮಾರಿಯೋ ಹೇಳಿಬಿಡು
ನಾ ಆ ದೇಶಕ್ಕೆ
ಬರುವೆ ನಿನ್ನನ್ನು
ಬಾಳಸಂಗಾತಿಯಾಗಿ
ವರಿಸುವ "ಸ್ವಯಂವರನಾಗಿ"

ಹೇ ಹುಡುಗಿ...
ನಿನ್ನನ್ನ ಹೆತ್ತ
ಆ ಮಹಾತಾಯಿ
ಯಾವ ಊರೆಂದೆ ಹೇಳಿಬಿಡು
ನಾ ಹೋಗಿ ನಮಿಸುವೆ
ಆ ತಾಯಿಯ ಪಾದ ಕಮಲಗಳಿಗೆ
ಕೋಟಿ.. ಕೋಟಿ "ನಮನಗಳನ್ನ"

ಹೇ ಹುಡುಗಿ...
ನೀ ನೆಡೆದಾಡುವ ದಾರಿಯಾದರೂ
ಒಮ್ಮೆ ಹೇಳಿಬಿಡು
ಅಲ್ಲಿಗೆ ಬರುವೆ
ನಾ ಸಾರಥಿಯಾಗಿ
ಸೂರ್ಯ,ಚಂದ್ರ ರನ್ನ
ಪಲ್ಲಕ್ಕಿಯ ಚಕ್ರಗಳನ್ನಾಗಿಸಿ
ಬೆಳದಿಂಗಳನ್ನ
ಹಾಸಿಗೆಯಾಗಿ ಹಾಸಿ
ನಿನ್ನನ್ನ ಪ್ರೇಮಲೋಕಕ್ಕೆ
ಕರೆದೂಯ್ಯುವ "ಪ್ರೇಮಿಯಾಗಿ"

ಕಾಣದ ಗೆಳತಿಗೂಂದು ಪ್ರೇಮಪತ್ರ..
SATISH N GOWDA

Thursday, August 5, 2010

ಕನಸಿನ ಹುಡುಗಿ..



ಕನಸಿನ ಹುಡುಗಿ..

ನೆನೆಸಿಕೊಂಡರೆ ನೀ ಕೋಟ್ಟ
"ಕನಸಿನ" ಸುಂದರ ನೆನೆಪುಗಳನ್ನ
ಕಳೆಯಲಾಗುತ್ತಿಲ್ಲ
ನೀನಿಲ್ಲದ ಈ ದಿನಗಳನ್ನ
ತಾಳಲಾಗುತ್ತಿಲ್ಲ ನಿನ್ನ
ಅಗಲಿಕೆಯ ಕ್ಷಣಗಳನ್ನ
ಸುಖಾ ಸುಮ್ಮನೆ ನೀ
ಕಾಯಿಸಬೇಡ ನನ್ನನ್ನು
ಬಂದುಬಿಡೆ ಹುಡುಗಿ
ನನ್ನ ಹೃದಯದ ಬಾಗಿಲಿಗೆ.

ಕಾಯಿಸಿ... ಕಾಯಿಸಿ
ಕೊಲ್ಲಬೇಡವೇ ಗೆಳತಿ
ನಿನ್ನ ಅಗಲಿಕೆಯಲ್ಲಿ
ನಾ ಬೆಂದು ಬಡವನಾಗಿರುವೆ
ನಿನ್ನ ನೋಡೊ ಆ ಒಂದು
ಸುಮಧುರ ಕ್ಷಣಕ್ಕಾಗಿ
ಕೋಟಿ...ಕೋಟಿ ಜನ್ಮಗಳ
ತಪಸ್ಸಿನ ಪಲವಾಗಿ
ಹುಟ್ಟಿ ಬಂದಿರುವೆ
ಸುಖಾ ಸುಮ್ಮನೆ ಕಾಯಿಸಬೇಡ
ಒಮ್ಮೆ ಬಂದುಬಿಡೆ ನನ್ನ ಕಣ್ಣಮುಂದೆ.

ಗೆಳತಿ ನೀ ನನ್ನ
ಪ್ರೀತಿಸಿದ್ದೆ ಆದರೆ
ಇನ್ನೊಂದು "ತಾಜ್ ಮಹಲ್"
ಕಟ್ಟೊ ತಾಕತ್
ಮತ್ತೊಂದು "ಪ್ರೇಮಲೋಕ"
ಸೃಷ್ಟಿಸೊ ದೈರ್ಯ ನನಗಿದೆ
ಸುಖಾ ಸುಮ್ಮನೆ ಕಾಯಿಸಬೇಡವೇ ಗೇಳತಿ
ಇನ್ನೊಂದು ಜನ್ಮದ ನಂಬಿಕೆ ನನಗಿಲ್ಲ
ಬಂದು ಬಿಡೆ ಹುಡುಗಿ ನನ್ನ ಕಣ್ಣಮುಂದೆ

SATISH N GOWDA