Monday, November 1, 2021

Thursday, July 23, 2015

ತಿರುಪತಿಯಲ್ಲಿನ ಶ್ರೀನಿವಾಸನ ಮೂರ್ತಿ.

ತಿರುಪತಿಯಲ್ಲಿನ ಶ್ರೀನಿವಾಸನ ಮೂರ್ತಿಯ
ವಿಸ್ಮಯಗಳು:-


1] ಶ್ರೀನಿವಾಸನ ಪೂರ್ತಿ ವಿಗ್ರಹ
ಸೊಪೂರ್ಣವಾಗಿ ಸ್ವಯ೦
 ಉದ್ಭವಮೂರ್ತಿ.
ಇದನ್ನು ಯಾರೂ ಸ್ಥಾಪನೆಮಾಡಿಲ್ಲ.
ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ
ಪ್ರತಿಯೊ೦ದು ಅ೦ಗಾಗಳ ಗಾತ್ರ
ಪ್ರಮಾಣಬದ್ಧವಾಗಿದೆ.!!


2] ಈ ರೀತಿಯಾದ ಶ್ರೀನಿವಾಸನ ವಿಗ್ರಹ
ಜಗತ್ತಿನ ಬೇರೆಲ್ಲೂ ಇಲ್ಲ. ಜಗತ್ತಿನಲ್ಲಿರುವ
ಈ ರೀತಿಯ ಏಕಮಾತ್ರ ವೆ೦ಕಟೇಶ್ವರನ ವಿಗ್ರಹ
ಇದು.


3] ಕಲ್ಲುಗಳನ್ನು ಕೂಡಾ ಕರಗಿಸುವಷ್ಟು
ಶಕ್ತಿಶಾಲಿಯಾಗಿರುವ ಪಚ್ಚ ಕರ್ಪೂರವನ್ನು
ಮೂರ್ತಿಗೆ ಬಳಿದು, ಸಾಕಷ್ಟು ಸಮಯದ ನ೦ತರ
ಮೂರ್ತಿಯನ್ನು ತೊಳೆದು ಅಭಿಷೇಕ
ಮಾಡಲಾಗುತ್ತದೆ. ಹೀಗೆ ಶತಮಾನಗಳಿ೦ದ
ಮೂರ್ತಿಗೆ ಅದರಿ೦ದ ಅಭಿಷೇಕ ಮಾಡುತ್ತಾ
ಬ೦ದಿದ್ದರೂ, ಮೂರ್ತಿಯು ಒ೦ದಿಷ್ಟು
ಹೊಳಪನ್ನು ಕೂಡಾ ಕಳೆದುಕೊ೦ಡಿಲ್ಲ,
ಸ್ವಲ್ಪವೂ ಭಗ್ನವಾಗಿಲ್ಲ. ಶತಮಾನಗಳ ಹಿ೦ದೆ
ಹೇಗಿತ್ತೋ ಈಗಲೂ ಹಾಗೆಯೇ ಇದೆ.


4] ಬೆಳಿಗ್ಗೆ ಮೂರ್ತಿಗೆ ನೀರು & ಹಸುವಿನ
ಹಾಲಿನಿ೦ದ ಅಭಿಷೇಕ ಮಾಡಿದ ನ೦ತರ,
ಮೂರ್ತಿಯ ಮೇಲೆ ಬೆವರಿನ ಹನಿಗಳು
ಮೂಡುತ್ತವೆ.!! ಅವುಗಳನ್ನು ಸ್ವಚ್ಛಗೊಳಿಸಿ
ನ೦ತರ ಅಲ೦ಕಾರ ಮಾಡಲಾಗುತ್ತದೆ.
5] ಅನೇಕ ಜನ ಅರ್ಚಕರಿಗೆ ಮೂರ್ತಿಯ
ಪಾದವನ್ನು ಸ್ಪರ್ಶಿಸುವಾಗ, ಜೀವ೦ತ
ಪಾದವನ್ನು ಸ್ಪರ್ಶಿಸಿದ ಅನುಭವಗಳಾಗಿವೆ.


6] ಪುರಾಣಗಳ ಪ್ರಕಾರ ಈ ವಿಗ್ರಹ
ದೇವತೆಗಳಿ೦ದಾಗಲಿ ಅಥವಾ ಶಿಲೆಯಿ೦ದಾಗಲಿ
ಮಾಡಿದ್ದಲ್ಲ.ಅದು ಜನರ ಕಣ್ಣಿಗೆ ಶಿಲೆಯ೦ತೆ
ಕಾಣುತ್ತದೆ ಅಷ್ಟೇ.


7] ತಜ್ನರ ಪ್ರಕಾರವೂ ಈ ವಿಗ್ರಹ ಭೂಮಿಯ
ಮೇಲಿನ ಶಿಲೆಯಿ೦ದ ಮಾಡಲ್ಪಟ್ಟಿದ್ದಲ್ಲ. ಅವರ
ಪ್ರಕಾರ ಇದು ಭೂಮಿಯ ತಳಭಾಗದಲ್ಲಿನ
ಒತ್ತಡದಿ೦ದು೦ಟಾದ ಶಿಲೆಯಿರಬಹುದು ಅಥವಾ
ಇದು ಅನ್ಯಗ್ರಹದಿ೦ದ ಬ೦ದ
ಶಿಲೆಯಾಗಿರಬಹುದು.!!


8] ಗ್ರ೦ಥಗಳ ಪ್ರಕಾರ ಈ ವಿಗ್ರಹ ಯುಗಗಳ
ಹಿ೦ದೆಯೇ ಉದ್ಭವಿಸಿದ್ದು ಎ೦ದಿದ್ದರೆದಿದ್ದರೆ,
ಆಧುನಿಕ ಅಧ್ಯಯನಗಳ ಪ್ರಕಾರ ಈ ವಿಗ್ರಹ
ಎಷ್ಟು ಹಳೆಯದ್ದು ಎ೦ಬುದಕ್ಕೆ ಯಾವುದೇ
ಖಚಿತ ಆಧಾರಗಳಿಲ್ಲ.


9] ರಾತ್ರಿಯ ಸಮಯದಲ್ಲಿ ಅಥವಾ ನೈವೇದ್ಯ
ಸಮರ್ಪಣೆಗಾಗಿ ಗರ್ಭಗುಡಿಯ ಬಾಗಿಲು
ಮುಚ್ಚಿದ ಕೆಲ ಸ೦ದರ್ಭಗಳಲ್ಲಿ, ಒ೦ದು ಬೆಕ್ಕು
ಗರ್ಭಗುಡಿಯಿ೦ದ ನಿಗೂಢವಾಗಿ
ಹೊರಬರುತ್ತದೆ. ಅದು ಬರುವ ದಾರಿಗಳಾಗಲಿ
ಅಥವಾ ಹೇಗೆ ಪ್ರತ್ಯಕ್ಷವಾಗುತ್ತದೆ
ಎನ್ನುವುದಾಗಲಿ ಎಲ್ಲವೂ ನಿಗೂಢ.!!

Saturday, July 11, 2015

AGE OF SONG

AGE OF SONG
1 to 6year👶
Laali laali jojo..
7 to 13👦
Twinkle Twinkle
Little Star..
14 to 25👱
Preetiyalli
Iro Sukha..
26 to 40👨
Noorondu
Nenapu..
41 to 50..👲
Yarige Beku
E Loka..
51 to 70👳
Yellige Payana..
Yaavudo Daari..
Above 70👴
No Songs,
Only Music🎶🎶
Danka Naka,
Naka Naka..
Dank Nakaa.....   😃😃




AGE OF SONG
SATISH N GOWDA

Monday, December 27, 2010

ಅಂದೊಂದಿತ್ತು "ಅಮ್ಮನ ಸೀರೆ "


ಅಂದೊಂದಿತ್ತು "ಅಮ್ಮನ ಸೀರೆ "
ಹೊಡೆದ  ಹಣೆ   ರಕ್ತವನ್ನ 
ಓರೆಸುವ ಕರವಸ್ತ್ರವಾಗಿತ್ತು,
ಮುರಿದ ಕಾಲ ಕಟ್ಟುವ 
ಮೊದಲ ಬಟ್ಟೆಯೂ ಅದಾಗಿತ್ತು . 

ಧಣಿದು ಬಂದ ಬೆವರಿಗೆ 
ಆಸರೆಯಾಗಿತ್ತು   "ಅಮ್ಮನ ಸೀರೆ "
 ಕೊಡಿಟ್ಟ ಪುಡಿಗಾಸಿನ
ಪೆಟ್ಟಿಗೆಯಾಗಿತ್ತು"ಅಮ್ಮನ ಸೀರೆ "

ನೆನೆದು ಬಂದ ತಲೆಯ 
ಒರೆಸುತ್ತಿತ್ತು "ಅಮ್ಮನ ಸೀರೆ "
ಚಳಿಗಾಲದಲ್ಲಿ ಬೆಚ್ಚನೆಯ 
ಕಂಬಳಿಯಾಗಿತ್ತು  "ಅಮ್ಮನ ಸೀರೆ "   


ಹೊತ್ತು ತರುವ ಮಡಿಕೆಗೆ 
ಒತ್ತಡಿಯಾಗಿತ್ತು  "ಅಮ್ಮನ ಸೀರೆ "
ಕಿತ್ತು ತಿನ್ನುವ ದೇಹಕ್ಕೆ 
ರಕ್ಷಣೆಯಾಗಿತ್ತು "ಅಮ್ಮನ ಸೀರೆ "  

ಇಂದಿನ ನಾರಿಗೆ ಸೀರೆ ಎಲ್ಲಿದೆ  
ತುಂಡು  Jeens Jacket ಗಳ ಮೋಹ ಹೆಚ್ಚಾಗಿದೆ  
ಇನ್ನೆಲ್ಲಿದೆ  ಕೈ ವರೆಸುವ ಕರವಸ್ತ್ರ .
ಮುರಿದ ಕಾಲಿಗೆ  ಕಟ್ಟುವ ಬಟ್ಟೆ . 

"ಅಮ್ಮನ ಸೀರೆ "
SATISH N GOWDA   

ಅಂದೊಂದಿತ್ತು "ಅಮ್ಮನ ಸೀರೆ "

ಅಂದೊಂದಿತ್ತು "ಅಮ್ಮನ ಸೀರೆ "
"ಅಮ್ಮನ ಸೀರೆ "

Thursday, December 23, 2010

( ನಿಜವಾದ ಪ್ರೇಮಿಗಳಿಗೆ ಮಾತ್ರ )

 

 

ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು




ಈ ಕಥೆಗಾರನ ಒಂದು ಪ್ರೇಮ ಸಂದೇಶ
ಪ್ರೇಮಿಗಳೆ ಎಚ್ಚರ !
ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು
ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಪ್ರೀತಿ ಅಂದರೆ ಏನು....???
ಪ್ರೀತಿಲಿ ಏನಿದೆ...???
ಅದು ಪ್ರೀತ್ಸೊರಿಗೆ ಮಾತ್ರ ಗೊತ್ತು.ಪ್ರೀತಿ ಅಂದರೆ ಒಂದು ಚಟ.ಸಿಗರೇಟ್ ಸೇದೋದು ಬಿಡು ಅಂದ್ರೆ ಬಿಡಬಹುದು, ಕುಡಿಯೋದು ಬಿಡೋ ಅಂದ್ರೆ ಬಿಡಬಹುದು.ಆದ್ರೆ ಬಿಡಿಸಲಾಗದ ಒಂದೇ ಒಂದು ಚಟ ಅಂದ್ರೆ ಪ್ರೀತಿನೇ. ಪ್ರೀತಿಲಿ ಕಷ್ಟ-ಸುಖ, ನೋವಿ-ನಲಿವು ಎಲ್ಲಾ ಇದೇ ಆದರೆ ಎಷ್ಟೇ ನೋವಿದ್ರು ಅದನ್ನು ಮರೆಸುವಂತಹ ಶಕ್ತಿ ಪ್ರೀತಿಲಿದೆ. ಪ್ರೀತಿಗೊಸ್ಕರ ಯಾರ್‍ಯಾರೋ ಏನೇನೋ ಸಾಧನೆ ಮಾಡ್ತಾರೆ. ಪ್ರೀತಿಗಾಗಿ ಕೈ ಕುಯ್ದುಕೊಂತಾರೆ ಅಪ್ಪ-ಅಮ್ಮನ್ನು ಹೆದರಿಸಿ ಮದುವೆನೂ ಆಗ್ತಾರೆ ಇನ್ನೂ ಸ್ವಲ್ಪ ಜನ ಮುಟ್ಟಾಳರು ಪ್ರಾಣನೇ ಕಳ್ಕೊಳ್ತಾರೆ.ಸತ್ತು ಸಾಧಿಸೋದು ಪ್ರೀತಿ ಅಲ್ಲ ಇದ್ದು ಜಯಿಸೋದೆ ಪ್ರೀತಿ. ಪ್ರೀತಿಲಿ ಮೇಲು ಕೀಳೆಂಬ ಜಾತಿ-ಭೇಧವಿಲ್ಲ,ಬಡವ-ಶ್ರೀ ಮಂತನೆಂಬ ಭೇಧವಿಲ್ಲ.ಎಷ್ಟೋ ತಂದೆ-ತಾಯಿಗಳು ಮಕ್ಕಳ ಭವಿಷ್ಯ ನೋಡದೇ ಬರ್ಈ ಆಸ್ತಿ-ಅಂತಸ್ತು ಎಂಬ ವ್ಯಾಮೋಹದಿಂದ ಪ್ರೇಮಿಗಳನ್ನು ದೂರ ಮಾಡ್ತಾರೆ. ಈ ಕಾಲದಲ್ಲಿ ಹುಡುಗರಿಂದ ಮೋಸ ಹೋಗೋ ಹುಡುಗಿಯರಿಗಿಂತ ಹುಡ್ಗೀರಿಂದ ಮೋಸ ಹೋಗೋ ಹುಡುಗರ್ಏ ಜಾಸ್ತಿ.ಈ ಹುಡ್ಗೀರು ಪ್ರೀತಿ ಮಾಡಬೇಕಾದ್ರೆ ಯಾರ ಮಾತು ಕೇಳಲ್ಲ. ಮದುವೆ ಆಗಬೇಕಾದ್ರೆ ಅಪ್ಪ-ಅಮ್ಮನ ನೆನಪು ಬರುತ್ತೆ.ಮನಸ್ಸು ಕೊಟ್ಟಿದ್ದು ನಾನು ಮರೆತು ಮದುವೆಯಾದೇಯೇನು....???
ಮರೆಯ ಬೇಡವೇ ಹೃದಯಾ ಈ ನನ್ನ ಪ್ರೀತಿಯ
ಕರೆಯ ಬೇಡವೇ ಹೃದಯಾ ಈ ನನ್ನ ಪ್ರಾಣವ !!!
ಹಸಿವೆಂದರೆ ಗೊತ್ತಿಲ್ಲ
ನಿದಿರೇನು ಬರೋದಿಲ್ಲ
ಹಗಲಿರುಳು ತಿಳಿದಿಲ್ಲ
ಹಾಳಾದರು ಪ್ರೀತೀಲ್ ಬಿದ್ದೋರೆಲ್ಲ !!!
ಹುಡುಗರು ಪ್ರೀತಿ ಕೇಳಿದರೇ....
ಹುಡುಗಿಯರು ಪ್ರಾಣವನ್ನೇ ಕೇಳ್ತಾರೆ !!!
ಹಕ್ಕಿ ಮರಿಗಾಗಿ ಮರದಲ್ಲಿ ಗೂಡು ಕಟ್ಟಿದರೆ...
ಹುಡುಗರು ಹುಡುಗಿಯರಿಗಾಗಿ ಮನದಲ್ಲಿ ಗೂಡು ಕಟ್ತಾರೆ !!!
ಪ್ರೀತಿಸೋ ಹುಡುಗರ್ಏ ಇಗೋ ನನ್ನ ಪ್ರೇಮ ಸಂದೇಶ
ನೀವು ಪ್ರೀತಿಸಿದ ಹುಡುಗಿ ನಿಮಗೆ ಸಿಗಲ್ಲಿಲ್ಲ ಅಂತ ಬೇಜಾರು ಮಾಡ್ಕೋಬೇಡಿ ನಿಮ್ಮನ್ನು ಪ್ರೀತಿಸುವ ಹುಡುಗಿ ನಿಮಗೆ ಸಿಕ್ಕೇ ಸಿಕ್ತಾಳೆ.ನಾವು ಪ್ರೀತಿಸಿದ ಹುಡುಗಿ ನನ್ನೇ ಲವ್ ಮಾಡಬೇಕು, ನನ್ನನ್ನೇ ಮದುವೆಯಾಗಬೇಕು ನನ್ ಜೊತೇನೆ ಬಾಳಬೇಕು ಅಂದ್ರೆ ಅದು ಪ್ರೀತಿನೇ ಅಲ್ಲ ಬರ್ಈ ಸ್ವಾರ್ಥ !!! ನಾವು ಪ್ರೀತಿಸಿದ ಹುಡುಗಿ ಎಲ್ಲೇ ಇದ್ರು ಹೇಗೇ ಇದ್ರೂ ಚೆನ್ನಾಗಿ ಇರಬೇಕು ಅನ್ನೋದೇ ನಿಜವಾದ ಪ್ರೀತಿ. ನೀವು ಇಷ್ಟು ತ್ಯಾಗ ಮಾಡಿ ಸಾಕು ನಿಮ್ಮ ಜೀವನವೇ ಸಾರ್ಥಕ ಈ ಪ್ರಪಂಚದಲ್ಲಿ ಸಾವಿರಾರು ಜೀವಿಗಳು ಅದರಲ್ಲಿ ಯಾರ ಪ್ರೀತಿ ಯಾರಿಗೋ....ಯಾರ ಹೃದಯ ಇನ್ಯಾರಿಗೋ....
ಹಾಗೇನೆ ಪ್ರೀತಿಸೋ ಹುಡುಗಿಯರೇ ನಿಮಗೂ ನನ್ನ ಪ್ರೇಮ ಸಂದೇಶ
ಯಾರಾದರೂ ಹುಡುಗರು ಬಂದು ನಿಮಗೆ ಪ್ರಪೋಸ್ ಮಾಡಿದರೆ ನಿಮಗೆ ಇಷ್ಟ ಇದ್ರೆ ಪ್ರೀತಿ ಮಾಡಿ ಇಲ್ಲ ಅಂದ್ರೆ ಆಗೋಲ್ಲ ಅಂತ ನೇರವಾಗಿ ಹೇಳಿ ಪ್ಲೀಸ್ ಸುಮ್ನೆ ಪ್ರಾಣ ಹಿಂಡಬೇಡಿ ಯಾಕಂದ್ರೆ ಹುಡುಗ್ರು ನಿಮ್ಮನ್ನು ಹೃದಯಕ್ಕೆ ಕೊನೆಗೆ ದೇವತೆಗೂ ವರ್ಣನೆ ಮಾಡಿ ಹೋಲಿಸುತ್ತಾರೆ ಜನ್ಮ ಕೊಟ್ಟ ತಂದೆ-ತಾಯಿಗೋಸ್ಕರ ಪ್ರಾಣ ಕೊಟ್ಟಿರೋ ಘಟನೆ ಇತಿಹಾಸದಲ್ಲೆಲ್ಲೂ ಇಲ್ಲ ಅಂತಹದರಲ್ಲಿ ನಿನ್ನೆ ಮೊನ್ನೆ ಬಂದ ನಿಮಗೋಸ್ಕರ ಪ್ರಾಣನೆ ಕೊಡೊಕೆ ಸಿದ್ದವಾಗಿರುತ್ತಾರೆ ಪ್ಲೀಸ್ ಹುಡುಗರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ಬದುಕಲು ಅವಕಾಶ ಕೊಡಿ !!!
ಬದುಕೋರಿಗೆ ಭೂ ಲೋಕ
ಸಾಯೋರಿಗೆ ಯಮಲೋಕ
ಪ್ರೀತ್ಸೋರಿಗೆ ಪ್ರೇಮಲೋಕ
ನಿಮಗಾಗಿ ನನ್ನ ಹೃದಯಲೋಕ
ಪಾರ್ಕು ಸಿನಿಮಾ ಸುತ್ತೋದಲ್ಲಾ ಪ್ರೀತಿ
ಮದುವೆಯಾಗಿ ಮಕ್ಕಳು ಮಾಡೋದಲ್ಲಾ ಪ್ರೀತಿ
ಕಾಫಿ ಡೇಲಿ ಕಾಲ ಕಳೆಯೋದಲ್ಲಾ ಪ್ರೀತಿ
ಕಣ್ಣು ತೆರೆದು ಕನಸು ಕಣೋದೇ ಈ ಪ್ರೀತಿ
ಪ್ರೀತಿ ಎಷ್ಟು ಎತ್ತರವೋ ನಿಜವಾಗಿ ಪ್ರೀತಿಸೋರಿಗೆ ಅದು ಹತ್ತಿರ.........
ಪ್ರೀತಿಗೋಸ್ಕರ ಸಾಯೋದಾಗಲಿ, ಸಾಯಿಸೋದಾಗಲಿ ಇನ್ನೊಬ್ಬರಿಗೆ ನೋವು ಮಾಡುವುದಾಗಲೀ ಮಾಡಿದರೆ ಅದು ಪ್ರೀತಿ ಅಲ್ಲ ಪ್ರೀತಿಗೆ ಮಾಡಿದ ಅವಮಾನ....
ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ....?????

Wednesday, November 24, 2010

ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....


ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....

ಓದುವ ಮುನ್ನ....
ಪ್ರಿಯ ಬ್ಲಾಗಿಗರೇ... ಈ ಲೇಖನವನ್ನು ಪ್ರಕಟಿಸಿದ್ದು ಯಾರ 
ಮನಸ್ಸು ನೊಯಿಸಲಿಕ್ಕಾಗಲಿ ,ಅಥಾವ ಓಲೈಸಲಿಕ್ಕಾಗಲಿ ಅಲ್ಲ. 
ಕೆಲವೊಮ್ಮೆ ಇಂತಹ ಘಟನೆಗಳು ಗೊತ್ತಿದ್ದೊ ಅಥವ ಗೊತ್ತಿಲ್ಲದೆಯೊ 
ನಮ್ಮ ಮದ್ಯ ನೆಡೆದುಹೊಗುತ್ತವೆ ಅಂತಹ ನೂರಾರು ಘಟನೆಗಳಲ್ಲಿ ಇದು 
ಸಹ ಒಂದು. ಹೆಂಗೆಳೆಯರ ಮನಸ್ಸಿನಲ್ಲಿ ನನ್ನ ಮೇಲೆ ಕ್ಷಮೆ ಇರಲಿ.....

             ಸುಮಾರು 8-10  ವರ್ಷಗಳ ಹಿಂದೆ ...ನಾನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ  S S L C  ಓದುತ್ತಿದ್ದ ಸಮಯ School Day ಅಂತ ಒಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಇಟ್ಟುಕೊಂಡಿದ್ದರು ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮೇಡಂ,  ಯಾರಾದರು ಕಥೆ, ಕವನ, ಚುಟುಕು ಹಾಸ್ಯ, ನಾಟಕ, ಇತ್ಯಾದಿಗಳಲ್ಲಿ ಭಾಗವಹಿಸುವವರು ತಮ್ಮ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು ಎಂದು ಮೇಮೊ ಕಳುಹಿಸಿದ್ದರು. ನನ್ನ ತರಗತಿಯ ಹೈದಾರು (ಪಕ್ಕಾ ಲೋ ಕ್ಲಾಸ್) ಹುಡುಗರ ಗುಂಪಿನ ನಾಯಕ ನಾನು , ಎಲ್ಲರೂ ಕುಳಿತುಕೊಂಡು ಕೆಲಕಾಲದ ಚರ್ಚೆಯ ನಂತರ ಒಂದು ನಾಟಕ ಮಾಡಿಯೇ ತೀರುವುದಾಗಿ ನಿರ್ಣಯಸಿದೆವು.

              ನಾಟಕದ ಒಳ ಅರ್ಥ:  1947ರ ಸ್ವಾತಂತ್ರ್ಯಕ್ಕೂ ಮೂದಲು ಭಾರತ ಬ್ರಿಟಿಷರ  ಆಳ್ವಿಕೆಯಲ್ಲಿ ಇದ್ದಾಗ ಭಾರತೀಯರು ಯಾವುದೆ ಸಭೆ, ಸಮಾರಂಭ ನೆಡೆಸುವಂತಿರಲಿಲ್ಲ, ನಾಲ್ಕೈದು ಜನ ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ಮಾತನಾಡುವಂತಿರಲಿಲ್ಲ ಹಾಗು ಯಾವುದೇ ವಿಷಯಗಳನ್ನು ಚರ್ಚಿಸುವಂತಿರಲಿಲ್ಲ. ಹಾಗೇನಾದರು ಅವರ ಮಾತಿಗೆ ಮೀರಿ ನೆಡೆದಿದ್ದಲ್ಲಿ ಬ್ರಿಟೀಷ್ ಕಾರ್ಯಕರ್ತರು ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಅರ್ಥ ಬಿಂಬಿಸುವಂತ ನಾಟಕ ಆಡುವುದು ಎಂದು ನಮ್ಮ-ನಮ್ಮಲ್ಲಿ ತೀರ್ಮಾನಿಸಿಕೊಂಡೆವು ಅದಕ್ಕೆ ಎಲ್ಲರ ಸಮ್ಮತಿಯು ಇತ್ತು. ಸರಿ next day ಇಂದ ನಾಟಕದ ಪ್ರಾಕ್ಟೀಸ್ ಶುರುವಾಯಿತು.

            ನಾಟಕದ ಅಂತಿಮ ಪ್ರಾಕ್ಟೀಸ್:ಎಲ್ಲಾ ಪ್ರಾಕ್ಟೀಸ್ ಮುಗಿಯಿತು ನಾವೊಂದು ನಾಲ್ಕೈದು ಜನ ರಸ್ತೆಯಲ್ಲಿ ಮತಾನಾಡುತ್ತಿದ್ದಾಗ ಬ್ರಿಟಿಷ  ಅದಿಕಾರಿಯಾದ ನೀನು ನಮ್ಮನ್ನು "ಆ.... ಡಮಾರ್. ಆ ಡಮಾರ್....." ಎಂದು ಪಿಸ್ತೂಲಿನಿಂದ ಕೊಲ್ಲ ಬೇಕು ಎಂದು "ರವಿ" ಯನ್ನು ನೇಮಿಸಿದೆವು. ಅವನಿಗೆ ಸ್ವಲ್ಪ ನಾಲಿಗೆ ತೊದಲಿತ್ತು. ಅವನಿಗೆ ಎಷ್ಟು ಹೇಳಿಕೊಟ್ಟರು ನಾಯಿಬಾಲ ಡೊಂಕು ಎಂಬಂತೆ ಆ..... ಡಗಾರ್. ಆ ಡಗಾರ್.... ಎನ್ನುತ್ತಿದ್ದ. ಡಗರ್ ಎಂದರೆ ಅಗಷ್ಟೆ ವೇಶ್ಯಚಾರಿಣಿ ಎಂಬ ಅರ್ಥಕ್ಕೆ ಮಾರ್ಪಾಡುತ್ತಿದ್ದ ದಿನಗಳು ಅವು. ಇದನ್ನೆಲ್ಲ ಅರಿಯದ   ಮುಗ್ದ ಮನಸ್ಸಿನ ಪುಟ್ಟ ಯುವಕರಾದ ನಾವು  ನಾಟಕ ಪ್ರದರ್ಶಿಸುವ ದಿನ ಬಂದೇ ಬಿಟ್ಟಿತ್ತು.
            
              ನಾಟಕದ ಸ್ಟೇಜಿನಲ್ಲಿ: ಅಂದಿನ ದಿನ ಒಂದು ರೀತಿಯ ಭಯ, ಅತಂಕ ನಮ್ಮಲ್ಲಿ ಮನೆ ಮಾಡಿತ್ತು. " ರೋಗಿ ಬಯಸಿದ್ದು ಹಾಲು,ಅನ್ನ. ಡಾಕ್ಟರ್ ಹೇಳಿದ್ದೂ ಹಾಲು, ಅನ್ನ" ಎನ್ನುವ ಹಾಗೆ ನಮ್ಮ ಹೆಸರನ್ನು ಕೊನೆಯಲ್ಲಿ ಸೇರಿಸಿದ್ದರು. ನಾಟಕ ಶುರುವಾಯಿತು 15 ನಿಮಿಷಗಳ ನಮ್ಮ ನಾಟಕವನ್ನು ನೋಡಲು ಜನರು ಹುಮ್ಮಸ್ಸಿನಿಂದ ಕೇಕೆ ಹಾಕುತ್ತಿದ್ದರು ( ನಾಟಕದ ವಿಷಯ ಪಾಪ ಅವರಿಗೊ ಗೊತ್ತಿಲ್ಲ)  ನಾವು ರಸ್ತೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅದಿಕಾರಿಯಾದ ರವಿ ನಮ್ಮನ್ನು ಗುರಿಯುಟ್ಟು ಆ....ಡಗಾರ್. ಆ.....ಡಗಾರ್ ಎನ್ನುತ್ತಿದ್ದರೆ ಅಲ್ಲಿದ್ದ ಅಷ್ಟು ಜನ ಸಿಳ್ಳೆಹೊಡೆದು ನಗುತ್ತಿದ್ದರು. ಮುಂದಿನ ಸೀಟುಗಳಲ್ಲಿ ಕುಳಿತ ಹುಡುಗಿಯರತ್ತ ಪಿಸ್ತೂಲ್ ಗುರಿಮಾಡಿ ಆ...ಡಗಾರ್. ಆ....ಡಗಾರ್ ಎನ್ನುತ್ತಿದ್ದಾಗ ಹುಡುಗಿಯರು ಕೂಡ ಕೇಕೆ ಹಾಕಿ ನಗುತ್ತಿದ್ದರು. ಅಷ್ಟೇ ಆದರೆ ಜನ enjay ಮಾಡಿ ನಕ್ಕು ಮನೆಗೆ ಹೋಗುತ್ತಿದ್ದರೋ ಎನೋ..! ಅದರೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಮೇಡಂ ಕಡೆಗೊ ಗುರಿಮಾಡಿ ಆ....ಡಗಾರ್. ಆ..ಡಗಾರ್ ಎಂದ. ಅಲ್ಲಿದ್ದ ಅಷ್ಟೊ ಜನ ಶಿಕ್ಷಕರೂ ಸೇರಿ ನಗಲು ಪ್ರಾಂರಬಿಸಿದರು. ನಾಟಕ ಮುಗಿಯುತು ಅವರೆಲ್ಲ ಎದ್ದು ಮನೆಗೆ ಹೊರಟು ಹೋದರು ನಮಗೆ ಕಾದಿತ್ತು "ಮಾರಿ ಹಬ್ಬ"
       
             next day : ನಾವೆಲ್ಲ ನಾರ್ಮಲ್ ಹಾಗಿ ಶಾಲೆಗೆ ಹೊದೆವು ಹುಡುಗರೆಲ್ಲ ನಮ್ಮ ನಾಟಕ ಮೆಚ್ಚಿಕೊಂಡಿದ್ದರು ಬೆಳಗಿನ ಪ್ರಾರ್ಥನೆ ಮುಗಿದು ಶಾಲೆಗೆ ಹೊಗುವ ಸಮಯದಲ್ಲಿ ಸತೀಶ್ ಅವನ ಗ್ರೂಪ್ ಪ್ರಾಂಶುಪಾಲರನ್ನ ಕಾಣತಕ್ಕದ್ದು ಎಂದು ಮೇಮೋ ಕಳಿಹಿಸಿ ಕರೆಸಿಕೊಂಡರು. ಕಾರಣ ಗೊತ್ತಿರಲಿಲ್ಲ ಹೊಳಗಿದ್ದ ಮೇಡಂ ಬಡ್ಡಿಮಕ್ಳ ನನ್ನನ್ನೇ "ಡಗಾರ್" ಅಂತ ಕರೀತಿರಾ.... ಅಂತ ಹೇಳಿ, ನಾಟಕ ಮಾಡಿದ ತಪ್ಪಿಗೆ ಬಾಸುಣಿಗೆ ಬರೊ ತರ ಹೊಡೆದು ಕಿವಿ  ಹಿಡಿದು ದಿನವಿಡೀ ಕುರ್ಚಿಯಲ್ಲಿ ಕುಳ್ಳರಸಿದ್ದರು. 

SATISH N GOWDA

ಎಲ್ಲಿರುವೆ ನೀ ಚಲುವೆ


ಎಲ್ಲಿರುವೆ ನೀ ಚಲುವೆ

ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ.. ಏನೋ.. ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೋಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

ಎಲ್ಲಿರುವೆ ನೀ ಚಲುವೆ
SATISH N GOWDA 

ನಿನ್ನ ಪ್ರೀತಿಗೆ ದಾಸನಾಗಲು..?

  
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಸುಂದರ ರೂಪ
ನನ್ನ ಕನಸಲ್ಲಿ ಬಂದು
ನ್ನನ್ನೆಲ್ಲ ರಾತ್ರಿಗಳನ್ನು
ಒಂದೇ ಸಮನೆ ಲೋಟಿ ಮಾಡುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರಿಯತಮನಾಗಲು..?

ಜೇನಿನ ಹನಿಯಂತ ನಿನ್ನ ಪ್ರೀತಿ
ನ್ನನ್ನೀ ಹೂವಿನಂತ ಮನಸ್ಸುನ್ನು
ಸದ್ದಿಲ್ಲದೇ ದಿನೇ ದಿನೇ ದೋಚಿ ಹೊಯ್ಯುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ಸದಾ ನಿನ್ನದೇ ನೆನಪುಗಳು
ನನ್ನ ಈ ಪುಟ್ಟ ಹೃದಯದಲ್ಲಿ
ದಿನಕಳೆದಂತೆ ರಾಶಿಯಾಗುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ಶರಣಾಗಲು..?

ನಾಳಿನ ಕನಸುಗಳನ್ನು ಹೊತ್ತ ನನ್ನೀ ದೇಹ
ದಿನ ಬೆಳಗಾಗುವುದುರೊಳಗಾಗಿ
ನಿನ್ನ ನೆನಪುಗಳೊಂದಿಗೆ ಮಿಲನವಾಗುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಪ್ರೀತಿಗೆ ದಾಸನಾಗಲು..?
SATISH N GOWDA

Friday, November 12, 2010

ನೆಚ್ಚಿನಗೆಳತಿಗೊಂದು ಆಹ್ವಾನ


ನೆಚ್ಚಿನಗೆಳತಿಗೊಂದು ಆಹ್ವಾನ

ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..

ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.

ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.

ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.

ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ


ನೆಚ್ಚಿನಗೆಳತಿಗೊಂದು ಆಹ್ವಾನ
SATISH N GOWDA