Thursday, September 16, 2010

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

(ಚಿತ್ರ ಕೃಪೆ ಗೂಗಲ್ )


ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ 
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ 
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು 
ಸುತ್ತಾಡಿದೆ ನಿನ್ನ ಮನೆಯನ್ನು 
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ 
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ 
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಎಲ್ಲಿಂದ ಬಂದ ಜೀವನವೋ ತಿಳಿಯದು 
ಎಲ್ಲಿಗೀ ಪಯಣವೋ ತಿಳಿಯದು 
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಅಂದು...! ಇಂದು ..!ಎಂದೂ...!
ನನ್ನದೊಂದೇ ಶಪಥ 
ಪ್ರೀತಿ ನಿನ್ನಯ ಮಡಿಲಿಗೆ 
ದೇಹ ಪ್ರಕೃತಿಯ ಸೊಬಗಿಗೆ ....!

ಇಂತಿ ನೊಂದ ಜೀವ 
SATISH N GOWDA  

15 comments:

ದಿನಕರ ಮೊಗೇರ said...

ಸತೀಶ್,
ವಿರಹ ತುಂಬಿ ತುಳುಕುತ್ತಿದೆ ಕವನದಲ್ಲಿ.....

ಎಲ್ಲಿಂದ ಬಂದ ಜೀವನವೋ ತಿಳಿಯದು
ಎಲ್ಲಿಗೀ ಪಯಣವೋ ತಿಳಿಯದು
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಈ ಸಾಲುಗಳು ತುಂಬಾ ಸೊಗಸಾಗಿದೆ........

ದಿನಕರ ಮೊಗೇರ said...

ಪ್ರವೀಣ್,
ನಿಮ್ಮನ್ನು ನೋಡಿ ತುಂಬಾ ಖುಶಿಯಾಗಿತ್ತು... ನೋಡಿದೊಡನೆ ಗುರುತು ಸಿಕ್ಕಿತ್ತು...... ನಿಮ್ಮ ಜೊತೆ ಕಳೆದ ಘಳಿಗೆ ಮರೆಯಲಾರದ್ದು..... ಅದನ್ನು ಮತ್ತೆ ನೆನಪು ಮಾಡಿಸಿದಿರಿ.....
ನೀವು ಬರೆದ ಕವನ ನಿಜಕ್ಕೂ ಸೊಗಸಾಗಿದೆ....... ಎಲ್ಲವನ್ನೂ ತುಂಬಿದೆ ಕವನ......

ಕೇಶವ ಪ್ರಸಾದ್.ಬಿ.ಕಿದೂರು said...

very nice

ಮನಸಿನಮನೆಯವನು said...

'ಎಲ್ಲಿರುವೆ ಮಾನವ ಕಾಡುವ ರೂಪಸಿಯೇ..' ಅಂತ ಹೆಲಿಕಾಪ್ಟರ್ ನಲ್ಲಿ ಹುಡುಕಾಡಿದರ..
'ಒಂದೇ ಒಂದು ಸಾರಿ..' ಎಂದು ಕೂಗಿ ಕರೆದಿರೇನು..
ಇಷ್ಟ ಬೇಗ ಸುಸ್ತಾಯ್ತ.. 'ಲೈಫ್ ಇಷ್ಟೇ..' ಅನ್ಕೊಂಡ್ರ..
'ಬಂದೆ ಬರ್ತಾರೆ..' ಕಾದ್ನೋಡಿ..

SATISH N GOWDA said...

ದಿನಕರ್ ಮೊಗೆರೆ ಸರ್ ತುಂಬಾ ಖುಷಿಯಾಯಿತು ನಿಮ್ಮ ಈ ಪ್ರತಿಕ್ರಯೆ ನೋಡಿ .
ನಿಜಕ್ಕೂ ಈ ಕವನ ಇಷ್ಟು ಚನ್ನಾಗಿ ಮೂಡಿಬರುತ್ತದೆ ಅಂತ ಗೊತ್ತಿರಲಿಲ್ಲ ,
ನಿಮ್ಮೀಲ್ಲರ ಪ್ರೋತ್ಸಾಹ ದಿಂದ ಇನ್ನಷ್ಟು ಕವಿತೆಗಳನ್ನು ಬರೆಯುವ ಪ್ರಯತ್ನ ಮಾಡುತ್ತೇನೆ

ಪ್ರೀತಿಯಿಂದ ....
ISH N GOWDA

SATISH N GOWDA said...

ಕೇಶವ್ ಪ್ರಸಾದ್ ಬಿ ಕಿದೊರು ರವರೆ ಧನ್ಯವಾದಗಳು ಹೀಗೆ ನನ್ನ ಜೊತೆಯಲ್ಲಿ ಸಾಗುತ್ತಿರಿ
ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯುವ ಪ್ರೋತ್ಸಾಹ ಕೊಡಿ

ಪ್ರೀತಿಯಿಂದ ....
ISH N GOWDA

SATISH N GOWDA said...

ಕತ್ತಲೆ ಮನೆಯವರಿಗೆ ಧನ್ಯವಾದಗಳು . ನಿಜ ಸರ್ ಬಂದೇ ಬರ್ತಾಳೆ ಅನ್ನೋ ದೈರ್ಯದ ಮೇಲೇ ಕಾಯುತ್ತಿದ್ದೇನೆ

ಪ್ರೀತಿಯಿಂದ ....
ISH N GOWDA

ಹಳ್ಳಿ ಹುಡುಗ ತರುಣ್ said...

hmmm satish nimma manasina novannu kandu ondu kashna hage summanaade... sunadra vagi viraha geete mudibandide... idu nimma nija jivanda kavite yagiddare.. nivu kaayuttiruva kaviteya rani nimmannarasi baralendu arasuttene...

ಮನದಾಳದಿಂದ............ said...

Satish,
ಕವನ ಚೆನ್ನಾಗಿದೆ, ಹುಡುಕಾಟ ನಿರಂತರ ಮುಂದುವರೆಯಲಿ, ಸಿಕ್ಕೆ ಸಿಗ್ತಾರೆ. ಸಿಗದೇ ಇನ್ನೆಲ್ಲಿ ಹೋಗ್ತಾರೆ?

SATISH N GOWDA said...

ಹಳ್ಳಿ ಹುಡುಗ ತರುಣ್ ರವರೆ ನಿಮ್ಮ ಅಶಿರ್ವದಕ್ಕೆ ನಾನೆಂದು ಚಿರಋಣಿ . ನಿಜ ಈ ಕವನ ನನ್ನ ಕನಸಿನ ಹುಡುಗಿಯದ್ದು............ ಅವಳ ದಾರಿಯಲ್ಲೇ ಕಾಯುತ್ತಿರುವೆ . ಹೀಗೇ ಪರತಿಕ್ರಿಯಿಸುತ್ತಿರಿ ಧನ್ಯವಾದಗಳು

SATISH N GOWDA said...

ಮದದಳದ ಮಾತು ಸರ್ ರವರಿಗೆ ಧನ್ಯವಾದಗಳು ......

SATISH N GOWDA said...

thanks VASANTH,

Unknown said...

nice poet ಸಿಕ್ಕೆ ಸಿಗ್ತಾರೆ. ಸಿಗದೇ ಇನ್ನೆಲ್ಲಿ ಹೋಗ್ತಾರೆ? wait n seee

Unknown said...

ಸಿಕ್ಕೆ ಸಿಗ್ತಾರೆ. ಸಿಗದೇ ಇನ್ನೆಲ್ಲಿ ಹೋಗ್ತಾರೆ?

SATISH N GOWDA said...

iam also waitng ri..